Advertisement

ಹಿಂದೂಪರ ಮಾತನಾಡಿದ್ದಕ್ಕೆ ಪೊಲೀಸ್ ಭದ್ರತೆ ಹಿಂಪಡೆದ ಸರ್ಕಾರ :ಯತ್ನಾಳ ಆಕ್ರೋಶ

03:30 PM Jan 16, 2021 | Team Udayavani |

ವಿಜಯಪುರ: ಹಿಂದೂಗಳ ಪರವಾಗಿ ಮಾತನಾಡಿದ್ದಕ್ಕೆ ಸರ್ಕಾರ ನನಗೆ ನೀಡಿದ್ದ ವೈಯುಕ್ತಿಕ ಪೊಲೀಸ್ ಭದ್ರತೆ ಹಿಂಪಡೆದಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.

Advertisement

ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ಭದ್ರತೆ ಹಿಂಪಡೆದ ಮಾಹಿತಿ ನೀಡುತ್ತಲೇ ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ದ್ವೇಷದ ರಾಜಕೀಯಕ್ಕಾಗಿ ನನಗೆ ಗುಪ್ತಚರ ಇಲಾಖೆ ವರದಿ ಆಧರಿಸಿ ಸರ್ಕಾರ ನೀಡಿದ್ದ ವೈಯಕ್ತಿಕ ಪೊಲೀಸ್ ಭದ್ರತೆ ಹಿಂಪಡೆದುದು ದುರ್ದೈವ ಎಂದರು.

ಇದನ್ನೂ ಓದಿ:ಬಡಪಾಯಿ ಡಿ-ಗ್ರೂಪ್ ನೌಕರರ ಮೇಲೆ ಪ್ರಯೋಗವೇಕೆ? ಮಂತ್ರಿಗಳು ಲಸಿಕೆ ಪಡೆದು ಮಾದರಿಯಾಗಲಿ:ಖಾದರ್

Advertisement

Udayavani is now on Telegram. Click here to join our channel and stay updated with the latest news.

Next