Advertisement

ಬಾಳ್ಕಟ್‌ ಅಚ್ಚುಕಟ್ಟು ಪ್ರದೇಶಗಳಿಗೆ ಬೇಕು ವಾರಾಹಿ ನೀರು

06:30 AM May 06, 2018 | Team Udayavani |

ಸಿದ್ದಾಪುರ: ಏರುತ್ತಿರುವ ತಾಪಮಾನದ ಪರಿಣಾಮ ನೀರಿನ ಅಭಾವ ಹೆಚ್ಚುತ್ತಿದ್ದು, ನೀರಿನ ನಿರ್ವಹಣೆ ಸರಿಯಾಗಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಿದ್ದಾಪುರ ಗ್ರಾಮದ ಮೂಲಕ ಹಾದು ಹೋಗುವ ವಾರಾಹಿ ಕಾಲುವೆಯ ನೀರನ್ನೂ  ಸಿದ್ದಾಪುರ ಕೆಳಾಪೇಟೆಯ ಕಾಶಿಕಾಲು ಕೆರೆಗೆ ಹಾಯಿಸಿ, ಅಲ್ಲಿಂದ ನೈಸರ್ಗಿಕದತ್ತವಾಗಿ ಹರಿಯುವ ನಾಲೆಯಲ್ಲಿ ಹರಿಸಬೇಕೆಂಬ ಒತ್ತಾಯವಿದೆ. 

Advertisement

ಹೀಗೆ ಮಾಡಬಹುದು…
ವಾರಾಹಿ ಕಾಲುವೆ ನೀರನ್ನು ಐರಬೈಲುವಿನಿಂದ ಪೈಪ್‌ಲೈನ್‌ ಮೂಲಕ ಬಾಳ್ಕಟ್‌ ನದಿಯ ಮೂಲವಾದ ಕಾಶಿಕಾಲು ಕೆರೆಗೆ ಹಾಯಿಸಬೇಕು. ಆಗ ನೈಸರ್ಗಿಕ ನಾಲೆಗಳಲ್ಲಿ ನೀರು ಹರಿಯುತ್ತದೆ. ಇದರಿಂದ ಸಿದ್ದಾಪುರ, ಅಂಪಾರು, ಆಜ್ರಿ ಮತ್ತು ಕೊಡ್ಲಾಡಿ ಹೀಗೆ ಹತ್ತಾರು ಗ್ರಾಮದ ಹಳ್ಳಿಗಳ ಕೃಷಿ ಭೂಮಿಗೆ ಹಾಗೂ ಕುಡಿಯುವ ನೀರಿನ ಮೂಲಕ್ಕೆ ಅನುಕೂಲವಾಗುತ್ತದೆ. ಇದಕ್ಕೆ ಕಡಿಮೆ ಮೊತ್ತದ ಹಣ ಬೇಕಿದ್ದು, ಯೋಜನೆಯಿಂದ ಎಲ್ಲೂ ಪರಿಸರ ನಾಶ ಅಥವಾ ಭೂಮಿ ಒತ್ತುವರಿ ಅಗತ್ಯ ಇರುವುದಿಲ್ಲ ಎನ್ನುವುದು ಬಾಳ್ಕಟ್ಟು ನದಿ ನೀರು ಬಳಕೆದಾರರ ಅಭಿಪ್ರಾಯವಾಗಿದೆ.

ಪ್ರಯೋಜನವೇನು? 
ವಾರಾಹಿ ನೀರನ್ನು ಬಾಳ್ಕಟ್‌ ನಾಲೆಯಲ್ಲಿ  20ಕಿ. ಮೀ. ದೂರ ಹರಿಯಲು ಅನುಕೂಲ ಕಲ್ಪಿಸಿದಲ್ಲಿ ಸುಮಾರು 410 ಹೆಕ್ಟೇರ್‌ ಕೃಷಿ ಭೂಮಿಗೆ ಅನುಕೂಲವಾಗುತ್ತದೆ. ಜತೆಗೆ ಕುಡಿಯುವ ನೀರಿನ ಮೂಲವೂ ವೃದ್ಧಿಸುತ್ತದೆ.   

ಯಾರಿಗೆಲ್ಲ ಉಪಯೋಗ? 
ಕೊಳ್ಕೆಬೈಲು, ಜಡ್ಡಿನಬೈಲು, ಅಕ್ಕುಂಜೆ, ಕೊಡ್ಗಿ, ಗುಳಿಗದ್ದೆ, ಹೆಗ್ಗೇರಿ, ಮಣಿಗಾರಡಿ, ಚೋನಾಳಿ, ಹೆರಬೈಲು, ಅಂಪಾರು ಗ್ರಾಮದ ಶ್ಯಾನ್ಕಟ್ಟು, ಬಾಳ್ಕಟ್‌, ಆಜ್ರಿ ಗ್ರಾಮದ ಕನ್ನಾಲಿ, ಮಾರ್ಡಿ, ಗಂಗಾಡಿ, ಹೊಲದಮನೆ, ಮೂರು ಸಾಲು ಪ್ರದೇಶಕ್ಕೂ ಅನುಕೂಲವಾಗುತ್ತದೆ. ಈ ನಾಲೆಯು ಕನ್ನಾಲಿ ಮಾರ್ಗವಾಗಿ ಕೊಡ್ಲಾಡಿ ಗ್ರಾಮದಲ್ಲಿ ಕುಬಾj ನದಿಗೆ ಜೋಡಣೆಯಾಗುತ್ತದೆ. ಕುಬಾj ನದಿಯ ಮೂಲಕ ನೀರು ಮುಂದುವರಿದಲ್ಲಿ ಮುಂದಿನ ಭೂ ಪ್ರದೇಶಗಳಿಗೂ ನೀರಿನ ಸೌಲಭ್ಯ ಕಲ್ಪಿಸಿದಂತಾಗುತ್ತದೆ.

ಕುಡಿಯುವ ನೀರಿಗೆ ಅನುಕೂಲ
ಬಾಳ್ಕಟ್‌ ಅಚ್ಚುಕಟ್ಟು ಪ್ರದೇಶಗಳಿಗೆ ವಾರಾಹಿ ಕಾಲುವೆ ನೀರು ಏತ ನೀರಾವರಿ ಮೂಲಕ ಹರಿಸುವುದರಿಂದ ನೈಸರ್ಗಿಕ ತೋಡುಗಳ ಮೂಲಕ ಕೃಷಿ, ಕುಡಿಯುವ ನೀರಿಗೆ ಅನುಕೂಲ. ಈ ಯೋಜನೆಯಿಂದ ಸಿದ್ದಾಪುರ ಅಲ್ಲದೇ ಪಕ್ಕದ ಗ್ರಾಮಗಳಿಗೂ ಉಪಯೋಗವಾಗುತ್ತದೆ.  
– ಎಸ್‌. ರಾಜೀವ ಶೆಟ್ಟಿ ಶಾನ್ಕಟ್ಟು, 
ಕಾರ್ಯದರ್ಶಿ, ಬಾಳ್ಕಟ್ಟು ನದಿ ನೀರು ಬಳಕೆದಾರರ ವೇದಿಕೆ

Advertisement

– ಸತೀಶ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next