Advertisement

Bajpe: ಗುರುಪುರ ನದಿಗೆ ಹಾರಿದ ವ್ಯಕ್ತಿಯ ಶವ ಪತ್ತೆ

08:16 PM Oct 07, 2024 | Team Udayavani |

ಬಜಪೆ: ಬಡಗ ಎಡಪದವು ಚಟ್ಟೆ ಪಾದೆ ನಿವಾಸಿ ರಮೇಶ್‌ ಕುಲಾಲ್‌ (48) ಗುರುಪುರದ ಫಲ್ಗುಣಿ ನದಿಗೆ ಹಾರಿದ್ದು ಸೋಮವಾರ ಬೆಳಗ್ಗೆ ಶವ ಪತ್ತೆಯಾಗಿದೆ.

Advertisement

ರಮೇಶ್‌ ಶನಿವಾರ ಸಂಜೆ ನಾಪತ್ತೆಯಾಗಿದ್ದು, ಸಹೋದರ ಬಜಪೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ರವಿವಾರ ಅವರ ಮೊಬೆೈಲ್‌ ಮತ್ತು ಪಾದರಕ್ಷೆ ಗುರುಪುರ ಸೇತುವೆ ಮೇಲೆ ಪತ್ತೆಯಾಗಿದ್ದು ಅವರು ನದಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರುವುದು ಶಂಕೆ ವ್ಯಕ್ತವಾಗಿತ್ತು. ಎಸ್‌ಡಿಆರ್‌ಎಫ್‌ ಮತ್ತು ಬಜಪೆ ಪೊಲೀಸರು ನದಿಯ ನೀರಿನಲ್ಲಿ ಅವರಿಗಾಗಿ ಶೋಧ ನಡೆಸಿದ್ದರು.

ಮಂಗಳೂರಿನ ಇನ್‌ಲ್ಯಾಂಡ್‌ ಕಂಪೆನಿಯಲ್ಲಿ ಜೆಸಿಬಿ ಆಪರೇಟರ್‌ ಆಗಿದ್ದ ರಮೇಶ್‌ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ಪತ್ನಿ, ಇಬ್ಬರು ಪುತ್ರರನ್ನು ಆಗಲಿದ್ದಾರೆ.

ಬಡಗಮಿಜಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣೆ ಕಾಮಗಾರಿಗಾಗಿ ಭೂಸ್ವಾಧಿಧೀನ ಪ್ರಕ್ರಿಯೆಯನ್ವಯ ಲಭಿಸಿದ ಪರಿಹಾರದ ಹಣದ ವಿಷಯದಲ್ಲಿ ತಾಯಿ ಮತ್ತು ಸಹೋದರರೊಳಗೆ ಉಂಟಾದ ವಿವಾದದಿಂದಾಗಿ ಖನ್ನತೆಗೊಳಗಾಗಿದ್ದರು ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next