Advertisement

ಜೆಡಿಎಸ್‌ನತ್ತ ಬೇಗ್‌ ಚಿತ್ತ?

11:14 PM Nov 16, 2019 | Team Udayavani |

ಬೆಂಗಳೂರು: ಶಿವಾಜಿನಗರದಿಂದ ಸ್ಪರ್ಧೆಗೆ ಬಿಜೆಪಿಯಲ್ಲಿ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡ ಬೇಕೋ, ಬಿಜೆಪಿಯನ್ನು ಬೆಂಬಲಿಸಬೇಕೋ ಅಥವಾ ಮರಳಿ ಕಾಂಗ್ರೆಸ್‌ನತ್ತ ಹೋಗಬೇಕೋ ಎಂಬ ಗೊಂದಲದಲ್ಲಿರುವ ರೋಷನ್‌ಬೇಗ್‌, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

Advertisement

ಶನಿವಾರ ಹೊಳೇನರಸೀಪುರಕ್ಕೆ ಹೋದ ರೋಷನ್‌ಬೇಗ್‌, ರೇವಣ್ಣ ಜತೆ ಮಾತುಕತೆ ನಡೆಸಿದರು. ಜೆಡಿಎಸ್‌ನಿಂದ ಸ್ಪರ್ಧಿಸುವುದು, ಇಲ್ಲವೇ ಪಕ್ಷೇತರನಾಗಿ ಸ್ಪರ್ಧೆ ಮಾಡಿ ಜೆಡಿಎಸ್‌ ಬೆಂಬಲ ಪಡೆ ಯುವುದು ರೋಷನ್‌ಬೇಗ್‌ ಉದ್ದೇಶ ಎಂದು ಹೇಳಲಾಗಿದೆ. ಈ ಹಿಂದೆ ಅವರು, ಎಚ್‌.ಡಿ.ದೇವೇಗೌಡರ ಜತೆಯೂ ಮಾತನಾಡಿದ್ದರು.

ಬಿಜೆಪಿ ಟಿಕೆಟ್‌ ಸಿಗದ ಕಾರಣ ಬೆಂಬಲಿಗರ ಸಭೆ ನಡೆಸಲಿರುವ ರೋಷನ್‌ಬೇಗ್‌, ಬೆಂಬಲಿಗರ ಜತೆ ಚರ್ಚಿಸಿ, ಜತೆಗೆ, ಕಾಂಗ್ರೆಸ್‌ ಪಕ್ಷದಿಂದ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುದನ್ನು ನೋಡಿಕೊಂಡು ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆಂದು ಹೇಳಲಾಗಿದೆ.

ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ರೋಷನ್‌ಬೇಗ್‌ ನನ್ನನ್ನು ಭೇಟಿಯಾಗಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ಹೆಸರು ಶಿವಾಜಿನಗರದಲ್ಲಿ ಘೋಷಣೆಯಾಗಿದೆ. ರೋಷನ್‌ಬೇಗ್‌ಗೆ ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next