Advertisement

ಇಂಗ್ಲೆಂಡ್‌ ವಿರುದ್ಧ ಅವಳಿ ಸ್ಪಿನ್‌ ದಾಳಿ: ಅಜರ್‌ ಸಲಹೆ

12:02 PM Jul 23, 2018 | |

ಹೊಸದಿಲ್ಲಿ: ಇಂಗ್ಲೆಂಡಿನ ಬಹಳಷ್ಟು ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್‌ ಕುಲದೀಪ್‌ ಯಾದವ್‌ ಅವರ ಎಸೆತಗಳನ್ನು ಎದುರಿಸಲು ಚಡಪಡಿಸು ತ್ತಿದ್ದು, ಟೆಸ್ಟ್‌ ಸರಣಿಯಲ್ಲಿ ಭಾರತ ಅವಳಿ ಸ್ಪಿನ್‌ ದಾಳಿ ಸಂಘಟಿಸಬೇಕು ಎಂಬುದಾಗಿ ಮಾಜಿ ನಾಯಕ ಮೊಹಮ್ಮದ್‌ ಅಜರುದ್ದೀನ್‌ ಸಲಹೆ ನೀಡಿದ್ದಾರೆ.

Advertisement

“ಇದೊಂದು ಹಸಿರು ಪಿಚ್‌. ಇಂಗ್ಲೆಂಡ್‌ ಮೂವರು ಸೀಮರ್‌ ಹಾಗೂ ಓರ್ವ ಸ್ಪಿನ್ನರ್‌ನನ್ನು ದಾಳಿಗಿಳಿಸ ಬಹುದು. ಆದರೆ ಭಾರತ 3-2ರ ಕಾಂಬಿನೇಶನ್‌ ಹೊಂದಿರುವುದು ಒಳ್ಳೆ ಯದು. 3 ಮಂದಿ ಪೇಸ್‌ ಹಾಗೂ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿ ದರೆ ಸಕಾರತ್ಮಾಕ ಫ‌ಲಿತಾಂಶ ಪಡೆಯ ಬಹುದು’ ಎಂಬುದಾಗಿ ಅಜರ್‌ ಹೇಳಿದ್ದಾರೆ.

“ಆಡುವ ಬಳಗದಲ್ಲಿ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅವರಿಗೆ ಅವಕಾಶ ನೀಡಬೇಕಾದುದು ಅಗತ್ಯ. ಜತೆಗೆ ಆರ್‌. ಅಶ್ವಿ‌ನ್‌ ಅವರನ್ನೂ ಆಡಿಸಬೇಕು. ಆದರೆ ರವೀಂದ್ರ ಜಡೇಜ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ’ ಎಂಬುದು ಅಜರುದ್ದೀನ್‌ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next