Advertisement

ಔರಂಗಜೇಬ್ ಸ್ಥಾನವನ್ನು ಅಶೋಕ್ ಗೆಹ್ಲೋಟ್ ತುಂಬಿದ್ದಾರೆ: ತೇಜಸ್ವಿ ಸೂರ್ಯ ಕಿಡಿ

06:44 PM Apr 13, 2022 | Team Udayavani |

ಜೈಪುರ : ಕೋಮು ಗಲಭೆ ನಡೆದಿದ್ದ ಕರೌಲಿಯನ್ನು ಪ್ರವೇಶಿಸದಂತೆ ತಡೆದ ನಂತರ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಕಿಡಿ ಕಾರಿ, ಅವರು ಔರಂಗಜೇಬ್ ಸ್ಥಾನವನ್ನು ತುಂಬಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Advertisement

ಕರೌಲಿಯ ಕೋಮುಗಲಭೆಯಲ್ಲಿ ಗಾಯಗೊಂಡಿರುವ ಸಂತ್ರಸ್ತರನ್ನು ಸವಾಯಿ ಮಾನ್ಸಿಂಗ್ ಆಸ್ಪತ್ರೆಯಲ್ಲಿ ಭೇಟಿಯಾಗಿ ಅವರ ಯೋಗಕ್ಷೇಮವನ್ನು ತೇಜಸ್ವಿ ಸೂರ್ಯ ವಿಚಾರಿಸಿದರು. ಗೆಹ್ಲೋಟ್ ಆಡಳಿತದಲ್ಲಿ ಹಿಂದೂವಾಗಿರುವುದೇ ತಪ್ಪು ಎಂದು ಸೂರ್ಯ ಕಿಡಿ ಕಾರಿದರು.

ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಹಾದುಹೋಗುವ ಬೈಕ್ ರ್‍ಯಾಲಿ ಮೇಲೆ ಕಲ್ಲು ತೂರಾಟ ನಡೆದ ನಂತರ ಕೋಮು ಘರ್ಷಣೆ ಸಂಭವಿಸಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಕರೌಲಿಯತ್ತ ತೆರಳಲು ಮುಂದಾಗಿದ್ದ ತೇಜಸ್ವಿ ಸೂರ್ಯ ಮತ್ತು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದರು ಮತ್ತು ಹಲವರನ್ನು ವಶಕ್ಕೆ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next