Advertisement

Fish Meal: ಮೀನು ತಿಂದು ವಿಡಿಯೋ ಹಂಚಿಕೊಂಡ ತೇಜಸ್ವಿ: ಬಿಜೆಪಿಯಿಂದ ತರಾಟೆ

11:49 PM Apr 10, 2024 | Team Udayavani |

ಪಾಟ್ನಾ: ಚೈತ್ರ ನವರಾತ್ರಿ ವೇಳೆ ಮೀನು ಸೇವನೆ ಮಾಡಿದ್ದಕ್ಕಾಗಿ ಬಿಹಾರದ ಮಾಜಿ ಡಿಸಿಎಂ ತೇಜಸ್ವಿ ಪ್ರಸಾದ್‌ ಟೀಕೆಗೆ ಗುರಿಯಾಗಿದ್ದಾರೆ.

Advertisement

ಜಾಲತಾಣಗಳಲ್ಲಿಯೂ ತೀವ್ರ ಟ್ರೋಲ್‌ಗ‌ಳಾಗಿವೆ. ಚೈತ್ರ ನವರಾತ್ರಿಯ ಮೊದಲ ದಿನವಾದ ಏ.9ರಂದು ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದ ತೇಜಸ್ವಿ ಮೀನು ತಿಂದಿದ್ದಾರೆ.

ಆ ವಿಡಿಯೋವನ್ನು ಜಾಲತಾಣದಲ್ಲೂ ಹಂಚಿಕೊಂಡು, ಚುನಾವಣೆ ಪ್ರಚಾರವಿರುವ ಹಿನ್ನೆಲೆಯಲ್ಲಿ ತಾವು ಕಾಪ್ಟರ್‌ನಲ್ಲೇ ಆಹಾರ ಸೇವನೆ ಮಾಡಿದ್ದಾಗಿ ಹೇಳಿಕೊಂಡಿದ್ದರು. ಈ ಬಗ್ಗೆ ಬಿಹಾರ ಡಿಸಿಎಂ ವಿಜಯ್‌ ಕುಮಾರ್‌ ಸಿನ್ಹಾ ಇದನ್ನು ಖಂಡಿಸಿ, ಶ್ರಾವಣದಲ್ಲಿ ಮಟನ್‌ ಸೇವನೆ, ನವರಾತ್ರಿಯಲ್ಲಿ ಮೀನು ಸೇವನೆ ಮಾಡುವುದು ಸನಾತನ ಧರ್ಮದ ಪದ್ಧತಿಗೆ ವ್ಯತಿರಿಕ್ತ. ತೇಜಸ್ವಿ ಸೀಸನಬಲ್‌ ಸನಾತನಿ! ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next