Advertisement

ಉದ್ಧವ್‌ ಠಾಕ್ರೆ ಜತೆ ಅಮಿತ್‌ ಶಾ ಭೇಟಿ

06:40 AM Jun 07, 2018 | Karthik A |

ಮುಂಬಯಿ/ಲಕ್ನೋ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮುಂಬೈನಲ್ಲಿ ಬುಧವಾರ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಜತೆಗೆ ಮಾತುಕತೆ ನಡೆಸಿದರು. 2019ರ ಚುನಾವಣೆಗಾಗಿ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿರುವ ಬಿಜೆಪಿ, ಮಿತ್ರಪಕ್ಷ ಶಿವಸೇನೆ ಎತ್ತಿರುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕಂಡುಕೊಳ್ಳುವುದಾಗಿ ಹೇಳಿದೆ. ಶಾ-ಠಾಕ್ರೆ ಭೇಟಿ ವೇಳೆ ರಾಮ ಮಂದಿರ ನಿರ್ಮಾಣ ವಿಚಾರ ಏನಾಯಿತು ಎಂದು ಕೇಳಿದ್ದಾಗಿ ಹಲವು ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೂ ಮುನ್ನ ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಅಮಿತ್‌ ಶಾ ಭೇಟಿಯ ಬಗ್ಗೆ ವ್ಯಂಗ್ಯವಾಡಿ ಸಂಪಾದಕೀಯ ಬರೆಯಲಾಗಿತ್ತು.

Advertisement

ಈ ನಡುವೆ ತಮ್ಮ ‘ಸಮರ್ಥನೆಗಾಗಿ ಸಂಪರ್ಕ’ ಎಂಬ ಅಭಿಯಾನದ ಪ್ರಯುಕ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಶಾ ಉದ್ಯಮಿ ರತನ್‌ ಟಾಟಾ ಹಾಗೂ ನಟಿ ಮಾಧುರಿ ದೀಕ್ಷಿತ್‌ರನ್ನು ಭೇಟಿ ಮಾಡಿದ್ದಾರೆ. ಗಾಯಕಿ ಲತಾ ಮಂಗೇಶ್ಕರ್‌ರನ್ನು ಭೇಟಿ ಮಾಡಲು ಷಾ ನಿರ್ಧರಿಸಿದ್ದರಾದರೂ, ಲತಾ ಅನಾರೋಗ್ಯದಿಂದಾಗಿ ಭೇಟಿ ರದ್ದಾಗಿದೆ. ಇದೇ ವೇಳೆ ಗುರುವಾರ ಚಂಡೀಗಢದಲ್ಲಿ ಅಕಾಲಿ ದಳ ನಾಯಕರನ್ನು ಮತ್ತು ಕ್ರೀಡಾ ಕ್ಷೇತ್ರದ ಪ್ರಮುಖರನ್ನು ಭೇಟಿಯಾಗಲಿದ್ದಾರೆ. 

ಮೈತ್ರಿಗೆ ಸಿದ್ಧ: ಮುಂದಿನ ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಎಸ್‌.ಪಿ. ನಾಯಕ ಅಖೀಲೇಶ್‌ ಯಾದವ್‌ ಹೇಳಿದ್ದಾರೆ. ಇದೇ ವೇಳೆ ಲೋಕಸಭೆ ಚುನಾವಣೆ ಜತೆಗೆ ಉತ್ತರ ಪ್ರದೇಶದಲ್ಲಿಯೂ ವಿಧಾನಸಭೆ ಚುನಾವಣೆ ನಡೆಸಲು ಬಿಜೆಪಿಗೆ ಅವರು ಸವಾಲು ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next