Advertisement

Arrested: ಚಿನ್ನ ಕದ್ದು ಮಾದಪ್ಪನ ದೇಗುಲಕ್ಕೆ ತಪ್ಪು ಕಾಣಿಕೆ ಹಾಕಿದ್ದ ಮೂವರ ಸೆರೆ

11:08 AM Apr 13, 2024 | Team Udayavani |

ಬೆಂಗಳೂರು: ನಕಲಿ ಬೀಗದ ಕೀ ಬಳಸಿ ಪಕ್ಕದ ಮನೆಗೆ ನುಗ್ಗಿ ನಗದು, ಚಿನ್ನಾಭರಣ ಕದ್ದು ಮಲೆ ಮಹದೇಶ್ವರ ದೇವಾಲಯಕ್ಕೆ ತಪ್ಪು ಕಾಣಿಕೆ ಹಾಕಿದ್ದ ಮೂವರು ಕಳ್ಳರನ್ನು ಕೆ.ಜಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕಿರಣ್‌, ಆನಂದ್‌, ನಾನಿ ಬಂಧಿತ ಆರೋಪಿಗಳು.

ಚಾಮರಾಜಪೇಟೆಯ ಅಪ್ಪುರಾವ್‌ ರಸ್ತೆಯಲ್ಲಿರುವ ಉಮಾ ಎಂಬುವವರ ಮನೆಯ ಪಕ್ಕದಲ್ಲೇ ಆರೋಪಿಗಳು ಕಳೆದ 15 ವರ್ಷಗಳಿಂದ ವಾಸವಾಗಿದ್ದರು. ಮಾ.29 ರಂದು ನಕಲಿ ಕೀ ಬಳಸಿ ಉಮಾ ಅವರ ಮನೆಗೆ ನುಗ್ಗಿ 6 ಲಕ್ಷ ರೂ. ನಗದು, 3.22 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು. ನೆರೆಮನೆಯಲ್ಲಿ ಹಣ ಹಾಗೂ ಚಿನ್ನಾಭರಣ ದೋಚಿದ ಈ ಮೂವರು ಕದ್ದ ಹಣದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಹುಂಡಿಗೆ ಹಣ ಹಾಕಿ ತಪ್ಪು ಕಾಣಿಕೆ ನೀಡಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next