Advertisement

ಅರ್ಜುನ ಪ್ರಶಸ್ತಿ ಸಾಧನೆಗೆ ಸಂದ ಗೌರವ: ಹರ್ಮನ್‌ಪ್ರೀತ್‌ ಕೌರ್‌

09:15 AM Aug 23, 2017 | Team Udayavani |

ಹೊಸದಿಲ್ಲಿ: ಈ ಬಾರಿಯ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ವನಿತಾ ಕ್ರಿಕೆಟ್‌ಪಟು, ಭಾರತ ತಂಡದ ಉಪನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಇದು ತನ್ನ ಸಾಧನೆಗೆ ಸಂದ ಗೌರವ, ಮುಂದಿನ ತನ್ನ ಆಟಕ್ಕೆ ಇದು ಸ್ಫೂರ್ತಿ ತುಂಬಲಿದೆ ಎಂದಿದ್ದಾರೆ.

Advertisement

ಕಳೆದ ವನಿತಾ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ವಿರುದ್ಧ ಅಜೇಯ 171 ರನ್‌ ಸಿಡಿಸುವ ಮೂಲಕ ಹರ್ಮನ್‌ಪ್ರೀತ್‌ ಕೌರ್‌ ಭಾರತೀಯ ಕ್ರೀಡಾಭಿಮಾನಿಗಳ ಮನೆಮಾತಾಗಿದ್ದರು. 

ಹರ್ಮನ್‌ಪ್ರೀತ್‌ ಕೌರ್‌ ಅರ್ಜುನ ಪ್ರಶಸ್ತಿಗೆ ಪಾತ್ರರಾದ ಕೇವಲ 6ನೇ ಕ್ರಿಕೆಟ್‌ ಆಟಗಾರ್ತಿ. ಉಳಿದವರೆಂದರೆ ಮಿಥಾಲಿ ರಾಜ್‌, ಜೂಲನ್‌ ಗೋಸ್ವಾಮಿ, ಡಯಾಜಾ ಎಡುಲ್ಜಿ, ಅಂಜು ಜೈನ್‌ ಮತ್ತು ಅಂಜುಮ್‌ ಚೋಪ್ರಾ.

Advertisement

Udayavani is now on Telegram. Click here to join our channel and stay updated with the latest news.

Next