Advertisement

ಅಂಡರ್‌-19 ಕ್ರಿಕೆಟ್‌: ಅರ್ಜುನ್‌ ತೆಂಡುಲ್ಕರ್‌ ಆಯ್ಕೆ

06:00 AM Jun 08, 2018 | Team Udayavani |

ಮುಂಬಯಿ: ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡುಲ್ಕರ್‌ ಮುಂಬರುವ ಶ್ರೀಲಂಕಾ ಸರಣಿಗಾಗಿ ಭಾರತದ ಅಂಡರ್‌-19 ತಂಡಕ್ಕೆ ಆಯ್ಕೆಯಾಗಿದ್ದಾರೆ. 

Advertisement

ಜುಲೈ ತಿಂಗಳಲ್ಲಿ ಭಾರತದ ಅಂಡರ್‌-19 ಕ್ರಿಕೆಟ್‌ ತಂಡ ಶ್ರೀಲಂಕಾ ಪ್ರವಾಸಗೈಯಲಿದ್ದು, 2 ಚತುರ್ದಿನ ಪಂದ್ಯ ಹಾಗೂ 5 ಏಕದಿನ ಪಂದ್ಯಗಳನ್ನು ಆಡಲಿದೆ.  ಚತುರ್ದಿನ ಪಂದ್ಯದಲ್ಲಿ ತಂಡವನ್ನು ದಿಲ್ಲಿ ವಿಕೆಟ್‌ ಕೀಪರ್‌ ಅನೂಜ್‌ ರಾವತ್‌ ಮುನ್ನಡೆಸಲಿದ್ದಾರೆ. ಏಕದಿನ ತಂಡಕ್ಕೆ ಉತ್ತರ ಪ್ರದೇಶದ ಆರ್ಯನ್‌ ನಾಯಕರಾಗಿದ್ದಾರೆ. 18 ವರ್ಷದ ಅರ್ಜುನ್‌ ತೆಂಡುಲ್ಕರ್‌ ಆಲ್‌ರೌಂಡರ್‌ ಆಗಿದ್ದು, ಭರವಸೆ ಮೂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next