Advertisement

ಬಡ ಜನರಿಗೆ ಊಟ ವಿತರಣೆ ಮಾಡಿದ ನಗರಸಭಾ ಅಧ್ಯಕ್ಷೆ ಅನುಷಾ

04:56 PM May 07, 2021 | Team Udayavani |

ಹುಣಸೂರು : ನಗರ ವ್ಯಾಪ್ತಿಯ ಅಸಹಾಯಕರು, ನಿರ್ಗತಿಕರಿಗೆ ನಗರಸಭೆ ವತಿಯಿಂದ ಕೊಡ ಮಾಡಿದ ಉಪಹಾರವನ್ನು ಅಧ್ಯಕ್ಷೆ ಅನುಷಾ ವಿತರಿಸಿದರು.

Advertisement

ನಗರದ ಸಂತೆ ಮಾಳದಲ್ಲಿ ಆಶ್ರಯ ಪಡೆದಿರುವ ಹಾವಾಡಿಗರ ಕುಟುಂಬಗಳಿಗೆ ಬೆಳಗಿನ ಉಪಹಾರ ವಿತರಿಸಿ ಮಾತನಾಡಿದ ಅವರು, ಕಳೆದ ವಾರದ ಮುಖಂಡರಾದ ನಿಂಗರಾಜು ಮಲ್ಲಡಿಯವರು ನಗರದ ಬಡ ಕುಟುಂಬಗಳಿಗೆ ನೆರವಾಗುವಂತೆ ನಮ್ಮ ಗಮನಕ್ಕೆ ತಂದಿದ್ದರು.

ಈ ಸಂಬಂಧ  ಸದಸ್ಯರು ಹಾಗೂ ಪೌರಾಯುಕ್ತರೊಂದಿಗೆ ಚರ್ಚಿಸಿ ಜನತಾ ಕರ್ಫ್ಯೂ  ಮುಗಿಯುವವರೆಗೆ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ಊಟ ವಿತರಿಸುವ ಭರವಸೆ ನೀಡಿದರು.

ನಗರದಲ್ಲಿ 150 ಕುಟುಂಬಗಳು ಊಟವಿಲ್ಲದೆ ಪರದಾಡುತ್ತಿದ್ದಾರೆ. ಅವರು ಇರುವ ಕಡೆಗಳಲ್ಲೇ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಅನುಷಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next