Advertisement

ತೂತುಕುಡಿ: ಮೃತರ ಕುಟುಂಬಕ್ಕೆ ರಜನಿಕಾಂತ್‌ ತಲಾ 2 ಲಕ್ಷ ರೂ.

03:16 PM May 30, 2018 | Team Udayavani |

ಚೆನ್ನೈ : ತಮಿಳು ನಾಡಿನ ತೂತುಕುಡಿಯಲ್ಲಿನ ವೇದಾಂತ ಕಂಪೆನಿಯ ಸ್ಟರ್‌ಲೈಟ್‌ ಕಾಪರ್‌ ಘಟಕದ ವಿರುದ್ಧ ಪ್ರತಿಭಟನೆ ನಡೆಸಿ ಪೊಲೀಸರ ಗುಂಡಿಗೆ ಬಲಿಯಾಗಿದ್ದವರ ಕುಟುಂಬಕ್ಕೆ ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ತಲಾ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. 

Advertisement

ತೂತುಕುಡಿ ಪ್ರತಿಭಟನೆಯಲ್ಲಿ ಗಾಯಗೊಂಡವರನ್ನು ಭೇಟಿಯಾಗಲು ಆಸ್ಪತ್ರೆಗೆ ಹೋಗಿದ್ದ ರಜನಿಕಾಂತ್‌ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದರು. ರಜನಿಕಾಂತ್‌ ಅವರು ತಮ್ಮ ಸ್ವಂತ ರಾಜಕೀಯ ಪಕ್ಷವನ್ನು ಸದ್ಯದಲ್ಲೇ ಘೋಷಿಸಲಿದ್ದಾರೆ. 

ಕಳೆದ ಮೇ 22ರಂದು ನಡೆದಿದ್ದ ತೂತುಕುಡಿ ಹಿಂಸಾತ್ಮಕ ಪ್ರತಿಭಟನೆಯ ವೇಳೆ ಪೊಲೀಸ್‌ ಫೈರಿಂಗ್‌ಗೆ 13 ಜನರು ಬಲಿಯಗಿರುವುದನ್ನು ಪ್ರತಿಭಟಿಸಿ ಪಕ್ಷದ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್‌ ಸಹಿತ ಡಿಎಂಕೆ ಸದಸ್ಯರು ಕಪ್ಪು ಬಟ್ಟೆ ಧರಿಸಿಕೊಂಡು ತಮಿಳು ನಾಡು ವಿಧಾನಸಭೆಗೆ ಬಂದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next