Advertisement

Anegundi ಉತ್ಸವ: ರಾಜವಂಶಸ್ಥರು,ಗಣ್ಯರಿಗೆ ಆಹ್ವಾನ ನೀಡಿದ ಶಾಸಕ ರೆಡ್ಡಿ

07:13 PM Mar 10, 2024 | Team Udayavani |

ಗಂಗಾವತಿ: ಮಾ.11,12 ರಂದು ತಾಲೂಕಿನ ಆನೆಗೊಂದಿಯಲ್ಲಿ ಆಯೋಜಿಸಿರುವ ಇತಿಹಾಸ ಪ್ರಸಿದ್ಧ ಆನೆಗೊಂದಿ ಉತ್ಸವಕ್ಕೆ ಆಗಮಿಸುವಂತೆ ಶಾಸಕ ಗಾಲಿ ಜನಾರ್ದನರೆಡ್ಡಿ ರಾಜವಂಶಸ್ಥರಾದ ಲಲಿತಾರಾಣಿ ಶ್ರೀರಂಗದೇವರಾಯಲು ಸೇರಿ ಆನೆಗೊಂದಿಯಲ್ಲಿರುವ ಎಲ್ಲಾ ರಾಜವಂಶಸ್ಥರ ಮನೆ ಮನೆಗೆ ತೆರಳಿ ಆಹ್ವಾನ ಪತ್ರಿಕೆ ನೀಡಿ ಶಾಲು ಹೊದಿಸಿ,ಫಲ ಪುಷ್ಪ ನೀಡಿ ಸಂಪ್ರದಾಯದಂತೆ ಆಹ್ವಾನಿಸಿ ಉತ್ಸವ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

Advertisement

ಗಂಗಾವತಿಯಲ್ಲಿ ಮಾಜಿ ಸಂಸದ ಎಚ್.ಜಿ.ರಾಮುಲು, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಮಾಜಿ ಸಚಿವ ಮಲ್ಲಿಕಾರ್ಜುನನಾಗಪ್ಪ, ಪರಣ್ಣ ಮುನವಳ್ಳಿ, ಸಿಂಗನಾಳ ಪಂಪಾಪತಿ, ಸಿಂಗನಾಳ ವಿರೂಪಾಕ್ಷಪ್ಪ ಸೇರಿ ಮಾಜಿ ಜನಪ್ರತಿನಿಧಿಗಳು, ಗಣ್ಯರು ಅನೇಕರಿಗೆ ಆಹ್ವಾನ ಪತ್ರಿಕೆ ನೀಡಿದರು.

ಈ ಸಂದರ್ಭದಲ್ಲಿ ಕೆಆರ್‌ಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮನೋಹರಗೌಡ,ಯಮನೂರ ಚೌಡ್ಕಿ, ದುರುಗಪ್ಪ ಆಗೋಲಿ, ಚನ್ನವೀರನಗೌಡ ಕೋರಿ, ರಮೇಶ ನಾಯಕ, ಟಿ.ಜಿ.ಬಾಬು ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next