Advertisement

ರಾಹುಲ್‌ಗೆ ಶಾ ಪಂಚಪ್ರಶ್ನೆ

06:05 AM Nov 05, 2017 | Team Udayavani |

ಗಾಂಧಿನಗರ: ಗುಜರಾತ್‌ನಲ್ಲಿ ಚುನಾವಣೆ ಪ್ರಚಾರದ ಅಬ್ಬರ ಜೋರಾಗಿದ್ದು, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಐದು ಪ್ರಶ್ನೆಗಳನ್ನು ಕೇಳಿದ್ದಾರೆ. ನರ್ಮದಾ ನದಿಗೆ ಸಂಬಂಧಿಸಿದಂತೆ ಈ ಪ್ರಶ್ನೆಗಳಿವೆ. ಗುಜರಾತ್‌ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಜೆಪಿ ಪ್ರದರ್ಶಿಸುತ್ತಿರುವ ಸನ್ನಿವೇಶ ಸತ್ಯವಲ್ಲ ಎಂದು ರಾಹುಲ್‌ ಗಾಂಧಿ ಪ್ರಚಾರ ಭಾಷಣದಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಅಮಿತ್‌ ಶಾ ಅವರು ರಾಹುಲ್‌ ಗಾಂಧಿಗೆ ಈ ಪ್ರಶ್ನೆಗಳನ್ನು ಕೇಳಿದ್ದಾರೆ.

Advertisement

ನರ್ಮದಾ ಯೋಜನೆ ಪೂರ್ಣಗೊಳಿಸಲು ಕಾಂಗ್ರೆಸ್‌ ಸರ್ಕಾರ ಯಾಕೆ ಅನುಮತಿ ನೀಡಿರಲಿಲ್ಲ? ನರ್ಮದಾ ಅಣೆಕಟ್ಟೆ ಗೇಟ್‌ಗಳನ್ನು ಮುಚ್ಚಲು ಕಾಂಗ್ರೆಸ್‌ ಸರ್ಕಾರ ಯಾಕೆ ಒಪ್ಪಿಗೆ ಕೊಟ್ಟಿರಲಿಲ್ಲ? ಕಛ… ವಲಯಕ್ಕೆ ಯಾಕೆ ವಿಶೇಷ ಅನುದಾನ ನೀಡಿರಲಿಲ್ಲ? ಗಾಂಧಿನಗರಕ್ಕೆ ಯುಪಿಎ ಅಧಿಕಾರದಲ್ಲಿದ್ದಾಗ ಕೇಂದ್ರದ ಅನುದಾನ ಯಾಕೆ ನೀಡಿರಲಿಲ್ಲ? ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಹಲವು ವರ್ಷಗಳವರೆಗೆ ಕಚ್ಚಾ ತೈಲ ರಾಯಧನ ನೀಡಿರಲಿಲ್ಲ? ಎಂದು ಅಮಿತ್‌ ಶಾ ಪ್ರಶ್ನೆಸಿದ್ದಾರೆ. ಮೊದಲು ಈ ಪ್ರಶ್ನೆಗಳಿಗೆ ರಾಹುಲ್‌ ಗಾಂಧಿ ಉತ್ತರಿಸುವ ಧೈರ್ಯ ತೋರಬೇಕು ಎಂದೂ ಅವರು ಈ ವೇಳೆ ಕುಟುಕಿದ್ದಾರೆ.

ಶನಿವಾರದಿಂದ 6 ದಿನಗಳ ಕಾಲ ಶಾ ಅವರು ಗುಜರಾತ್‌ನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದು, 33 ಜಿಲ್ಲೆಗಳಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next