Advertisement

ರಾಜ್ಯದಲ್ಲೂ ಮೋದಿ ಮಂತ್ರದಂಡ: ಬೀದರ್‌, ದೇವನಹಳ್ಳಿಯಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಶಾ ಚಾಲನೆ

11:46 PM Mar 03, 2023 | Team Udayavani |

ಬೀದರ್‌/ ಬೆಂಗಳೂರು: ಈಶಾನ್ಯ ರಾಜ್ಯಗಳಲ್ಲಿ ಪ್ರಧಾನಿ ಮೋದಿ ಜಾದೂ ಯಶಸ್ವಿಯಾಗಿದ್ದು, ಕರ್ನಾಟಕದಲ್ಲೂ ಇದೇ ಜಾದೂ ನಡೆಯಲಿದೆ. ಬಿಜೆಪಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯು ವುದು ನಿಶ್ಚಿತ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ದೇವನಹಳ್ಳಿ ಮತ್ತು ಬೀದರ್‌ನಲ್ಲಿ ಆಯೋಜಿಸ ಲಾಗಿದ್ದ “ವಿಜಯ ಸಂಕಲ್ಪ’ ಯಾತ್ರೆಯಲ್ಲಿ ಭಾಗವಹಿಸಿ ಮಾತ
ನಾಡಿದ ಅವರು, ತ್ರಿಪುರಾ, ನಾಗಲ್ಯಾಂಡ್‌ ಮತ್ತು ಮೇಘಾಲಯದಲ್ಲಿ ಕಾಂಗ್ರೆಸ್‌ ನೆಲಕಚ್ಚಿದೆ. ದುರ್ಬೀನು ಹಾಕಿ ನೋಡಿ ದರೂ ಕಾಣದಂತಾಗಿದೆ. ಈಶಾನ್ಯಕ್ಕೆ ಬಿಜೆಪಿ ಪ್ರವೇಶ ಅಸಾಧ್ಯ ಎಂದು ವ್ಯಂಗ್ಯ ಮಾಡಲಾಗುತ್ತಿತ್ತು. ಆದರೆ ಈಗ ಎರಡನೇ ಬಾರಿಗೆ ಬಿಜೆಪಿ ಸರಕಾರ ರಚನೆಯತ್ತ ಹೆಜ್ಜೆ ಹಾಕಿದೆ ಎಂದರು.

ಈಶಾನ್ಯ ರಾಜ್ಯಗಳಿಂದ ಗುಜರಾತ್‌ವರೆಗೆ ಬಿಜೆಪಿ ಸರಕಾರ ರಚಿಸಿದೆ. ಮುಂದೆ ಗುಜರಾತ್‌ನಿಂದ ಕರ್ನಾಟಕ ದವರೆಗೂ ಬಿಜೆಪಿಯ ಅಧಿಕಾರ ಹಬ್ಬ ಬೇಕು. ಬಿಜೆಪಿ ಏಕಪಕ್ಷೀಯವಾಗಿ ಗೆಲುವು ಸಾಧಿಸುವಂತೆ ಮಾಡುವ ಮೂಲಕ ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ ಕೈ ಬಲಪಡಿಸಲು ರಾಜ್ಯದ ಮತದಾರರು ಸಹಕರಿಸ ಬೇಕೆಂದು ಕರೆ ನೀಡಿದರು.

ಜೆಡಿಎಸ್‌ ವಿರುದ್ಧ ಕಿಡಿ
ಮಂಡ್ಯ ಭೇಟಿ ಸಂದರ್ಭ ಜೆಡಿಎಸ್‌ ವಿರುದ್ಧ ಕಿಡಿಕಾರಿದ್ದ ಶಾ, ದೇವನಹಳ್ಳಿ ಯಲ್ಲೂ ಜಾತ್ಯತೀತ ಜನತಾ ದಳದ ರಾಜಕೀಯ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ಗೆ ಕೇವಲ 25-30 ಸೀಟು ಮಾತ್ರ ಗೆಲ್ಲಲು ಸಾಧ್ಯ. ಅಷ್ಟೇ ಸೀಟುಗಳನ್ನು ಹಿಡಿದುಕೊಂಡು ಅದರ ನಾಯಕರು ಕಾಂಗ್ರೆಸ್‌ ಬಳಿ ಹೋಗುತ್ತಾರೆ. ಭ್ರಷ್ಟಾಚಾರದಲ್ಲಿ ನಂಬರ್‌ ವನ್‌ ಆಗಿರುವ ಕಾಂಗ್ರೆಸ್‌ ಜತೆ ಕೈ ಜೋಡಿಸಲು ದುಂಬಾಲು ಬೀಳುತ್ತಾರೆ ಎಂದರು.

ಎಲ್ಲ ಕ್ಷೇತ್ರಗಳಲ್ಲಿ ಕರ್ನಾಟಕ ಮತ್ತು ದೇಶವನ್ನು ಮೊದಲನೇ ಸ್ಥಾನಕ್ಕೆ ಕೊಂಡೊಯ್ದಿರುವ ಬಿಜೆಪಿಗೆ ಮತ ನೀಡಬೇಕೇ ಅಥವಾ ಪರಿವಾರವಾದ ಮತ್ತು ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿರುವ ಕಾಂಗ್ರೆಸ್‌ ಹಾಗೂ
ಜೆಡಿಎಸ್‌ಗೆ ಮತ ನೀಡಬೇಕೋ ಎಂಬುದನ್ನು ನೀವೇ ತೀರ್ಮಾನಿಸಬೇಕು. ತಮ್ಮ ಕುಟುಂಬದಲ್ಲೇ ಟಿಕೆಟ್‌ ಹಂಚಿಕೊಂಡು ಪರಿವಾರವಾದಕ್ಕೆ ಜೋತು ಬಿದ್ದಿರುವ ಪಕ್ಷ ಬಡವರ ಬಗ್ಗೆ ಚಿಂತಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್‌ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಪರಿವಾರದ ಎಟಿಎಂ ಬೀದರ್‌ ಬಸವಕಲ್ಯಾಣದ ಥೇರ್‌ ಮೈದಾನದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಪಕ್ಷ ನಾಯಕಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು. ಕಾಂಗ್ರೆಸ್‌ ಸರಕಾರದ ಅವ ಧಿಯಲ್ಲಿ ಮುಖ್ಯಮಂತ್ರಿ ಯಾಗಿದ್ದ ಸಿದ್ದರಾಮಯ್ಯ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುವುದನ್ನು ಬಿಟ್ಟು ದಿಲ್ಲಿ ಪರಿವಾರಕ್ಕೆ ಭ್ರಷ್ಟಾಚಾರದ ಹಣ ತಲುಪಿಸುವ ಎಟಿಎಂ ಆಗಿ ಕೆಲಸ ಮಾಡಿದ್ದರು ಎಂದು ಟೀಕಿಸಿದರು. ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ಆರಂಭವಾಗಿದೆ. ಮುಖ್ಯಮಂತ್ರಿ ಸ್ಪರ್ಧೆಯಲ್ಲಿರುವ 10 ಜನ ಕುರ್ಚಿ ಎಳೆದಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕರು ಯಾರೆಂಬುದು ಇನ್ನೂ ಅಂತಿಮವಾಗಿಲ್ಲ. ಅವರು ಸರಕಾರವನ್ನು ಹೇಗೆ ಮಾಡುತ್ತಾರೆ? ಇಂಥವರಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದರು.

ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ವಿಕಾಸಕ್ಕಾಗಿ ಬಿಜೆಪಿ ಸರಕಾರ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಬಜೆಟ್‌ನಲ್ಲಿ ಬೊಮ್ಮಾಯಿ ಈ ಭಾಗಕ್ಕೆ 3ರಿಂದ5 ಸಾವಿರ ಕೋಟಿ ರೂ. ಅನುದಾನವನ್ನು ಹೆಚ್ಚಿಸಿರುವುದು ಮೂಲ ಸೌಕರ್ಯದ ಜತೆಗೆ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿಎಸ್‌ ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಸಚಿವರಾದ ಪ್ರಭು ಚೌವ್ಹಾಣ್‌, ಬಿ. ಶ್ರೀರಾಮುಲು, ಶಂಕರ ಪಾಟೀಲ್‌ ಮುನೇನಕೊಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ, ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು, ಸಂಸದ ಉಮೇಶ ಜಾಧವ್‌, ಶಾಸಕರಾದ ಶರಣು ಸಲಗರ, ರಾಜಕುಮಾರ ತೇಲ್ಕೂರ್‌, ಮಾಲೀಕಯ್ಯ ಗುತ್ತೇದಾರ್‌, ದತ್ತಾತ್ರೇಯ ಪಾಟೀಲ, ಎಂಎಲ್‌ಸಿ ರಘುನಾಥ ರಾವ್‌ ಮಲ್ಕಾಪುರೆ, ಮಾಜಿ ಶಾಸಕರಾದ ಎಂ.ಜಿ ಮುಳೆ, ಬಾಬುರಾವ್‌ ಚಿಂಚನಸೂರ್‌ ಉಪಸ್ಥಿತರಿದ್ದರು.

ಬಡವರು, ರೈತರ ಅಭಿವೃದ್ಧಿ ಉದ್ದೇಶ
ರಾಜ್ಯದ ಬಡ ಜನರ, ರೈತರ ಅಭಿವೃದ್ಧಿಯು ವಿಜಯ ಸಂಕಲ್ಪ ಯಾತ್ರೆಯ ಉದ್ದೇಶವಾಗಿದೆ. ರಾಜ್ಯದಲ್ಲಿ ನಾಲ್ಕು ಭಾಗಗಳಿಂದ ಯಾತ್ರೆ ಆರಂಭ ಗೊಂಡಿದೆ. ಬಸವಕಲ್ಯಾಣದಿಂದ ಆರಂಭವಾಗಿ ರುವ ಯಾತ್ರೆ 7 ಜಿಲ್ಲೆಗಳಲ್ಲಿ ಸಂಚರಿಸಲಿದೆ. ಈ ಭಾಗದ 43 ವಿಧಾನಸಭೆ ಕ್ಷೇತ್ರಗಳಲ್ಲಿ ಕಮಲ ಅರಳಲಿದೆ ಎಂದು ಅಮಿತ್‌ ಶಾ ಹೇಳಿದರು.

ಮೋದಿ ಸಾವು ಜಪಿಸುವ ಕಾಂಗ್ರೆಸ್‌
ಮೋದಿ ಸಾಯಲಿ ಎಂದು ಕಾಂಗ್ರೆಸ್‌ನವರು ಜಪಿಸುತ್ತಿದ್ದಾರೆ. ಮೋದಿ ಮೇಲೆ ಎಷ್ಟೇ ಕೆಸರೆರಚಿದರೂ ಕಮಲ ಅರಳುತ್ತದೆ. ಕೆಸರಲ್ಲಿ ಅರಳಿ ಸುವಾಸನೆ ಬೀರುವುದು ಕಮಲದ ಸ್ವಭಾವ. ಹೀಗಾಗಿ ಸಿದ್ದರಾಮಯ್ಯ, ಶಿವಕುಮಾರ್‌ ಅವರಂಥವರು ಎಷ್ಟೇ ಕಟು ಮಾತನಾಡಿದರೂ ದೇಶದ ಜನ ಮೋದಿಗೆ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ ಎಂದು ಶಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next