Advertisement

Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್‌

12:27 AM Oct 03, 2023 | Team Udayavani |

ಹೊಸದಿಲ್ಲಿ: ಅತ್ತ ಭಾರತದ ಮೊದಲ ಸೌರ ಪರಿವೀಕ್ಷಕ ನೌಕೆ ಆದಿತ್ಯ-ಎಲ್‌1 ಭೂಮಿ ಯಿಂದ 1.5 ದಶಲಕ್ಷ ಕಿ.ಮೀ. ದೂರದ ತನ್ನ ಗಮ್ಯ ಸ್ಥಾನದತ್ತ ಪ್ರಯಾಣಿ ಸುತ್ತಿದ್ದರೆ, ಇತ್ತ ಭಾರತೀಯ ಬಾಹ್ಯಾ ಕಾಶ ಸಂಶೋಧನ ಸಂಸ್ಥೆ (ಇಸ್ರೋ) ಆದಿತ್ಯನ ಪ್ರತಿಯೊಂದು ನಡೆಯ ಮೇಲೂ ಕಣ್ಣಿಟ್ಟಿದೆ.

Advertisement

ಗಮ್ಯವನ್ನು ತಲುಪುವುದು ಮಾತ್ರವಲ್ಲ, ಆ ಸ್ಥಳದಲ್ಲಿ ನೆಲೆಗೊಳ್ಳು ವುದು ಕೂಡ ಆದಿತ್ಯ-ಎಲ್‌1ಗೆ ಸವಾಲೇ ಸರಿ. ಹೀಗಿದ್ದರೂ ನೌಕೆಯು ತನ್ನ ಗುರಿಯನ್ನು ಮುಟ್ಟಲಿ, ಕಕ್ಷೆಯಲ್ಲಿ ಸುರಕ್ಷಿತವಾಗಿ ನೆಲೆಸಲಿ ಎಂಬ ಉದ್ದೇಶ ಹೊಂದಿ ರುವ ಇಸ್ರೋ, ಬಾಹ್ಯಾಕಾಶ ನೌಕೆ ಎಲ್ಲಿದೆ ಮತ್ತು ಎಲ್ಲಿರಬೇಕು ಎಂಬುದರ ಬಗ್ಗೆಯೇ ಗಮನ ಕೇಂದ್ರೀಕರಿಸಿದೆ. ಈ ಟ್ರ್ಯಾಕಿಂಗ್‌ ಪ್ರಕ್ರಿಯೆಗೆ ಗಣಿತದ ಸೂತ್ರಗಳು ಮತ್ತು ವಿಶೇಷವಾಗಿ ಅಭಿವೃದ್ಧಿಪಡಿ ಸಲಾಗಿ ರುವ ಸಾಫ್ಟ್ ವೇರ್‌ ಅನ್ನು ನಾವು ನೆಚ್ಚಿ ಕೊಂಡಿ  ದ್ದೇವೆ ಎಂದು ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌ ಹೇಳಿದ್ದಾರೆ.

ಇಸ್ರೋದ ಯುಆರ್‌ ರಾವ್‌ ಬಾಹ್ಯಾಕಾಶ ಕೇಂದ್ರವು ಈ ಸಾಫ್ಟ್ ವೇರ್‌ ಅನ್ನು ಅಭಿವೃದ್ಧಿಪಡಿಸಿದೆ. ಆದಿತ್ಯ ನೌಕೆಯು ಎಲ್‌1 (ಲಾಗ್ರೇಂಜ್‌ ಪಾಯಿಂಟ್‌ 1) ನಲ್ಲಿ ಹೋಗಿ ನೆಲೆಗೊಳ್ಳಬೇಕಿದೆ. ಆದರೆ ಎಲ್‌1 ಒಂದು ರೀತಿ ಯಲ್ಲಿ “ಅಸ್ಥಿರ’ ವಾದ ಬಿಂದು. ಬಾಹ್ಯಾ ಕಾಶ ನೌಕೆಯನ್ನು ನಿಖರ ವಾಗಿ ಆ ಬಿಂದುವಿನಲ್ಲಿ ಕೂರಿಸು ವುದು ಪ್ರಾಯೋಗಿಕ ವಾಗಿ ಅಸಾ ಧ್ಯವೇ ಸರಿ. ಹೀಗಾಗಿ ನೌಕೆ ಯನ್ನು ಎಲ್‌1 ಬಿಂದುವಿನ ಕಕ್ಷೆಯೊಳಗೆ ತರುವ ಪ್ರಯತ್ನ ನಡೆಯಲಿದೆ. ಇಲ್ಲಿ ಯಾವುದೇ ಅಚಾತುರ್ಯ ಸಂಭವಿಸ ದಂತೆ ನೋಡಿ ಕೊಳ್ಳಲು ಹೊಸ ಕಕ್ಷೆ ನಿರ್ಣಾ ಯಕ ಸಾಫ್ಟ್ವೇರ್‌ ಅಭಿವೃದ್ಧಿಪಡಿಸಲಾಗಿದೆ ಎಂದು ಸೋಮನಾಥ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next