Advertisement

ಗಾಜನೂರಿನಲ್ಲಿ ಪುನೀತ್‌ರಾಜ್‌ಕುಮಾರ್: ಆಲದ ಮರದ ಕೆಳಗೆ ಕುಳಿತು ತಂದೆಯನ್ನು ಸ್ಮರಿಸಿದ ಅಪ್ಪು

09:41 PM Dec 24, 2020 | sudhir |

ಚಾಮರಾಜನಗರ: ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಜಿಲ್ಲೆಗೆ ಮೂರು ದಿನಗಳ ಭೇಟಿ ನೀಡಿದ್ದು, ತಮ್ಮ ಪಿಆರ್‌ಕೆ ಬ್ಯಾನರ್‌ನಡಿ ತಯಾರಿಸುತ್ತಿರುವ ಸಾಕ್ಷ್ಯಚಿತ್ರವೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

Advertisement

ಜಿಲ್ಲೆಯ ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿರುವ ಬೂದಿಪಡಗ, ಪುಣಜನೂರು, ಬೇಡಗುಳಿ, ಹೊನ್ನಮೇಟಿ ಮತ್ತಿತರ ಪ್ರದೇಶದಲ್ಲಿ ಅರಣ್ಯ ಕುರಿತ ಸಾಕ್ಷ್ಯಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ಅವರು ತಮ್ಮ ತಂದೆ ವರನಟ ಡಾ. ರಾಜ್‌ಕುಮಾರ್ ಅವರ ಹುಟ್ಟೂರಾದ ಗಾಜನೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಸಂದರ್ಭದಲ್ಲಿ ಗಾಜನೂರಿನ, ಡಾ.ರಾಜ್ ಜನಿಸಿದ ಮನೆ, ರಾಜ್ ಅವರ ಪಿತ್ರಾರ್ಜಿತ ಜಮೀನಿನಲ್ಲಿ ಓಡಾಡಿದರು. ರಾಜ್‌ಕುಮಾರ್ ಅವರು ಗಾಜನೂರಿಗೆ ಬಂದಾಗ ಕುಳಿತುಕೊಳ್ಳುತ್ತಿದ್ದ ಆಲದ ಮರದ ಕೆಳಗೆ ಕುಳಿತು ತಂದೆಯವರನ್ನು ಸ್ಮರಿಸಿದರು.

ಇದನ್ನೂ ಓದಿ:ಗಲ್ಫ್ ಹೊರತಾಗಿರುವ ಎನ್ನಾರೈಗಳಿಗೆ ಅಂಚೆ ಮತ ಪ್ರಸ್ತಾಪ ಇಲ್ಲ:ಚುನಾವಣಾ ಆಯೋಗ

ಗಾಜನೂರಿನ ಮನೆಯಲ್ಲಿ ಡಾ. ರಾಜ್ ತಂಗಿ ನಾಗಮ್ಮ ಅವರಿದ್ದು, ಅವರೊಡನೆ ಸಂತಸ ಹಂಚಿಕೊಂಡರು. ಪಿಆರ್‌ಕೆ ಪ್ರೊಡಕ್ಷನ್‌ನಿಂದ ಸಾಕ್ಷ್ಯಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

Advertisement

Advertisement

Udayavani is now on Telegram. Click here to join our channel and stay updated with the latest news.

Next