Advertisement

ವಾಟರ್‌ ಟ್ಯಾಂಕರ್‌ ಹಗರಣ: ಕೇಜ್ರಿವಾಲ್‌ ರಾಜಕೀಯ ಸಲಹೆಗಾರನಿಗೆ ಸಮನ್ಸ್

11:27 AM May 15, 2017 | Team Udayavani |

ಹೊಸದಿಲ್ಲಿ : 400 ಕೋಟಿ ರೂ. ಮೊತ್ತದ ಪ್ರಮಾಣದಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ವಾಟರ್‌ ಟ್ಯಾಂಕರ್‌ ಹಗರಣಕ್ಕೆ ಸಂಬಂಧಿಸಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ರಾಜಕೀಯ ಸಲಹೆಗಾರ ವಿಭವ್‌ ಪಟೇಲ್‌  ಅವರಿಗೆ ದಿಲ್ಲಿಯ ಭ್ರಷ್ಟಾಚಾರ ನಿಗ್ರಹ ದಳವು ಸಮನ್ಸ್‌ ಜಾರಿ ಮಾಡಿದೆ ಮತ್ತು ಈ ಹಗರಣ ಕುರಿತ ತನಿಖೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದೆ. 

Advertisement

ವಾಟರ್‌ ಟ್ಯಾಂಕರ್‌ ಹಗರಣದಲ್ಲಿ ಕೇಜ್ರಿವಾಲ್‌ಗೆ ನಿಕಟರಾಗಿರುವ ಇಬ್ಬರು ವ್ಯಕ್ತಿಗಳು – ವಿಭವ್‌ ಪಟೇಲ್‌ ಮತ್ತು ಆಶೀಶ್‌ ತಲ್ವಾರ್‌ ಭಾಗಿಯಾಗಿರುವುದಾಗಿ ಆಪ್‌ನಿಂದ ವಜಾಗೊಂಡಿರುವ ಜಲ ಸಚಿವ ಕಪಿಲ್‌ ಮಿಶ್ರಾ ಆರೋಪಿಸಿದ್ದು  ಆ ಪ್ರಕಾರ ಎಸಿಬಿ ಅವರಿಗೆ ನೊಟೀಸ್‌ಜಾರಿ ಮಾಡಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ. 

ವಾಟರ್‌ ಟ್ಯಾಂಕರ್‌ ಹಗರಣಕ್ಕೆ ಸಂಬಂಧಿಸಿದ ತನ್ನ ಆರೋಪಗಳಿಗೆ ಪೂರಕವಾಗಿ ಕಪಿಲ್‌ ಮಿಶ್ರಾ ಅವರು ಎಸಿಬಿಯೊಂದಿಗೆ ತನ್ನ ಪ್ರಮಾಣೀಕೃತ ಹೇಳಿಕೆಯನ್ನು ದಾಖಲಿಸಿದ್ದು ಸಾಕ್ಷ್ಯಗಳನ್ನು ಒದಗಿಸಿದ್ದಾರೆ.

ಆರೋಪಿ ಆಶಿಶ್‌ ತಲ್ವಾರ್‌ಗೆ ಕೂಡ ಎಸಿಬಿಯಿಂದ ಬೇಗನೆ ಸಮನ್ಸ್‌ ಜಾರಿಯಾಗಲಿದೆ. ಪಟೇಲ್‌ ಅವರ ಹೇಳಿಕೆಯನ್ನು ಎಸಿಬಿ ದಾಖಲಿಸಿಕೊಂಡ ಬಳಿಕ ಪಟೇಲ್‌ ಅವರನ್ನು ತನ್ನಲ್ಲಿಗೆ ಕರೆಸಿಕೊಳ್ಳಲಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next