Advertisement

ಸದ್ದಿಲ್ಲದೇ ತೆರೆಕಂಡಿತು ಆವಾಹಯಾಮಿ

10:58 AM Dec 31, 2017 | |

ಡಿಸೆಂಬರ್‌ 29ಕ್ಕೆ ಕನ್ನಡದಲ್ಲಿ “ಚಮಕ್‌’ ಒಂದೇ ಚಿತ್ರ ತೆರೆಕಾಣುತ್ತದೆ ಎಂದೇ ಹೇಳಲಾಗಿತ್ತು. ಆದರೆ, “ಚಮಕ್‌’ ಜೊತೆ ಮತ್ತೂಂದು ಚಿತ್ರ ಸದ್ದಿಲ್ಲದೇ ತೆರೆಕಂಡಿದೆ.ಅದು “ಆವಾಹಯಾಮಿ’. ಕೆ.ಜಿ.ರಸ್ತೆಯ ಮೆಜೆಸ್ಟಿಕ್‌ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಈ ಚಿತ್ರ ಪ್ರದರ್ಶನವಾಗುತ್ತಿದೆ. ಇದು ಸಂಪೂರ್ಣ ಹೊಸಬರ ಚಿತ್ರ. ಗಿರೀಶ್‌ ಕುಮಾರ್‌ ಈ ಚಿತ್ರದ ನಿರ್ದೇಶಕರು. ವುಡ್‌ಕ್ರೀಪರ್ ಈ ಚಿತ್ರದ ನಿರ್ಮಾಪಕರು.

Advertisement

ಸಾಫ್ಟ್ವೇರ್‌ ಇಂಜಿನಿಯರ್ ತಂಡ ಸೇರಿಕೊಂಡು “ಆವಾಹಯಾಮಿ’ ಎಂಬ ಚಿತ್ರ ಮಾಡಿದೆ. ಶೀರ್ಷಿಕೆ ಕೇಳಿದಾಕ್ಷಣ, ಇದೊಂದು ಹಾರರ್‌ ಚಿತ್ರ ಅನ್ನೋದು ಗೊತ್ತಾಗುತ್ತೆ. ಕನ್ನಡದಲ್ಲಿ ಸಾಕಷ್ಟು ಹಾರರ್‌ ಚಿತ್ರಗಳು ಬಂದಿವೆ. ಅವೆಲ್ಲಕ್ಕಿಂತ ಸ್ವಲ್ಪ ಹೊಸ ಪ್ರಯತ್ನದ ಮೂಲಕ ಇಲ್ಲಿ ಹೇಳುವ ಮತ್ತು ತೋರಿಸುವ ಪ್ರಯತ್ನ ಮಾಡಿದ್ದೇವೆ.

ಸಾಮಾನ್ಯವಾಗಿ ಹಾರರ್‌ ಚಿತ್ರಗಳಲ್ಲಿ ಗ್ರಾಫಿಕ್ಸ್‌ ಬಳಕೆ ಹೆಚ್ಚು. ಅದರೊಂದಿಗೆ ಇಲ್ಲಿ ನೈಜತೆಗೆ ಒತ್ತು ಕೊಡಲಾಗಿದೆ. ಇಲ್ಲಿ ಹಾರರ್‌ನೊಂದಿಗೆ ಹೆಣ್ಣು ಭ್ರೂಣ ಹತ್ಯೆ ಕುರಿತು ಒಂದು ಸಂದೇಶವೂ ಇದೆ. ಒಂದು ತಪ್ಪು ಮಾಡಿದಾಗ, ಆನಂತರ ಪಡುವ ಪಶ್ಚಾತ್ತಾಪ ಚಿತ್ರದ ಹೈಲೈಟ್‌. ಆ ತಪ್ಪಿನ ಅರಿವು ಏನೆಂಬುದು ಸಿನಿಮಾದೊಳಗಿನ ಸಾರ.

ಚಿತ್ರ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ ನಿರ್ದೇಶಕರು. ಚಿತ್ರದಲ್ಲಿ ವಿಜಯ್‌ರಾಜ್‌, ಅಕ್ಷತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  ಚಿತ್ರಕ್ಕೆ ಗೌತಮ್‌ ಶ್ರೀವತ್ಸ ಅವರ ಸಂಗೀತವಿದೆ. ಕಿರಣ್‌ ಕೆ.ನಾಯರ್‌ ಅವರ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next