Advertisement

Speed ತಗ್ಗಿಸಲು ಹೇಳಿದ್ದಕ್ಕೆ ಕಾರು ಹತ್ತಿಸಿ ಪೊಲೀಸ್‌ ಪೇದೆ ಹತ್ಯೆ

12:57 AM Sep 30, 2024 | Team Udayavani |

ಹೊಸದಿಲ್ಲಿ: ಬೈಕ್‌ನಲ್ಲಿ ಸಾಗುತ್ತಿದ್ದ ಪೊಲೀಸ್‌ ಪೇದೆಯೊ ಬ್ಬರು ಕಾರೊಂದರ ವೇಗ ಕಡಿಮೆ ಮಾಡಲು ಸೂಚಿಸಿದ ಹಿನ್ನಲೆಯಲ್ಲಿ ಕೋಪಗೊಂಡ ಚಾಲಕ ಪೇದೆಯ ಮೇಲೆ ಕಾರು ಹರಿಸಿ ಕೊಂದ ಘಟನೆ ದಿಲ್ಲಿಯ ನಂಗಲೋಯಿ ಪ್ರದೇಶದಲ್ಲಿ ನಡೆದಿದೆ. ಮಫ್ತಿಯಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ಸಂದೀಪ್‌ ತಮ್ಮ ಬೈಕ್‌ನ್ನು ಓವರ್‌ಟೇಕ್‌ ಮಾಡಲು ಯತ್ನಿಸುತ್ತಿದ್ದ ಕಾರಿನ ವೇಗವನ್ನು ತಗ್ಗಿಸಲು ಸೂಚಿಸಿದ್ದಾಗ ಕೋಪಗೊಂಡ ಕಾರು ಚಾಲಕ ಬೈಕ್‌ ಹಿಂಭಾಗಕ್ಕೆ ಗುದ್ದಿದ್ದು, ಕೆಳಗೆ ಬಿದ್ದ ಪೇದೆಯನ್ನು ಕಾರಿನ ಸಮೇತ 10 ಮೀ. ಎಳೆದೊಯ್ದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next