Advertisement

ಗೋ ಸಾಗಾಣಿಕೆ ವಾಹನ ತಡೆದ ಪ್ರಕರಣ: ಜಾಮೀನಿನಲ್ಲಿ ಬಿಡುಗಡೆಗೊಂಡವರಿಗೆ ಭವ್ಯ ಸ್ವಾಗತ

08:42 PM Jan 30, 2021 | Team Udayavani |

ಚಿಕ್ಕಮಗಳೂರು:  ಶೃಂಗೇರಿ ತಾಲೂಕಿನಲ್ಲಿ ಗೋ ಸಾಗಾಣಿಕೆ ನಡೆಸುತ್ತಿದ್ದ ವಾಹನಗಳನ್ನು ತಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಇಂದು ಜಾಮೀನಿನ ಮೂಲಕ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾದ ಕಾರ್ಯಕರ್ತರಿಗೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು.

Advertisement

ಕಳೆದ‌ 20 ದಿನಗಳ ಹಿಂದೆ ಶೃಂಗೇರಿಯ ತನಿಕೋಡು ಬಳಿ ಗೋ ಸಾಗಾಟ ಮಾಡುತ್ತಿದ್ದ ಎರಡು ವಾಹನಗಳನ್ನು ಹಿಂದೂ ಪರ ಸಂಘಟನೆ ಕಾರ್ಯಕರ್ತರು ತಡೆದಿದ್ದರು. ಈ ಸಂಬಂಧ ಗೋ ಸಾಗಾಟ ಮಾಡಿದವರ ಮೇಲೆ ಹಾಗೂ ತಡೆದಿದ್ದವರ ಮೇಲೆ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿದ್ದವು.

ಇದನ್ನೂ ಓದಿ:ಇಂದಿರಾಗಾಂಧಿ ಗೆಟಪ್ ನಲ್ಲಿ ತೆರೆಮೇಲೆ ಬರಲಿರುವ ಕಂಗನಾ

ಘಟನೆಯ ಬಳಿಕ ಬಂಧನಕ್ಕೆ ಒಳಗಾಗಿದ್ದ ಹಿಂದೂ ಪರ ಸಂಘಟನೆ ಕಾರ್ಯಕರ್ತರನ್ನು ಇಂದು ಬಿಡುಗಡೆಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಕಾರಗೃಹದ ಮುಖ್ಯ ದ್ವಾರದ ಬಳಿ ಹಿಂದೂ ಪರ ಘೋಷಣೆಗಳನ್ನು ಕೂಗುವ ಮೂಲಕ ಬಿಡುಗಡೆಗೊಂಡವರನ್ನು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next