Advertisement

ತಿಮ್ಮಕ್ಕ ಸೇರಿ 6 ಮಂದಿಗೆ ಗೌ.ಡಾಕ್ಟರೇಟ್‌?

11:14 PM Feb 11, 2020 | Lakshmi GovindaRaj |

ಕಲಬುರಗಿ: ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಗಿರುವ ಸಾಲು ಮರದ ತಿಮ್ಮಕ್ಕ ಸೇರಿ ಆರು ಗಣ್ಯ ರಿಗೆ ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಲು ಸಿದ್ಧತೆ ನಡೆಸಿದೆ.

Advertisement

ಸಾಲು ಮರದ ತಿಮ್ಮಕ್ಕ ಸೇರಿ ಹಿರಿಯ ಸಾಹಿತಿಗಳಾದ ಡಾ.ಚೆನ್ನವೀರ ಕಣವಿ, ದೇವನೂರ ಮಹಾದೇವ, ಡಾ.ಎಸ್‌.ಎಲ್‌.ಭೈರಪ್ಪ, ಕಲಬುರಗಿ ಮ.ಗು. ಬಿರಾದಾರ, ಇಸ್ರೋ ಮುಖ್ಯಸ್ಥ ಕೆ.ಶಿವನ್‌ ಅವರ ಸಾಧನೆ ವಿವರಣೆಯೊಳಗೊಂಡ ಶಿಫಾರಸು ಪಟ್ಟಿಯನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ ಅವರಿಗೆ ಸಲ್ಲಿಸಲಾಗಿದೆ. ಮಾರ್ಚ್‌ನಲ್ಲಿ ನಡೆಯುವ ವಿವಿ ಐದನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲು ಉದ್ದೇಶಿಸಲಾಗಿದೆ. ಘಟಿಕೋತ್ಸವಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಆಗಮಿಸಿ ಭಾಷಣ ಮಾಡುವ ಸಾಧ್ಯತೆಗಳಿವೆ.

ದಶಕದ ಸಂಭ್ರಮದಲ್ಲಿ ವಿವಿ: 2009ರಲ್ಲಿ ಸಂಸತ್ತಿನ ಕಾಯ್ದೆಯಡಿ ಸ್ಥಾಪಿತವಾದ 16 ವಿವಿಗಳ ಪೈಕಿ ಕರ್ನಾ ಟಕ ಕೇಂದ್ರೀಯ ವಿವಿ ಒಂದಾಗಿದ್ದು, ಈಗ ದಶಕದ ಸಂಭ್ರಮದಲ್ಲಿದೆ. 2009ರಲ್ಲಿ ಕೇಂದ್ರೀಯ ವಿವಿ ಶೈಕ್ಷಣಿಕ ಚಟುವಟಿಕೆ ಕಲಬುರಗಿ ವಿವಿಯಲ್ಲಿ ತಾತ್ಕಾಲಿಕ ವಾಗಿ ಆರಂಭವಾಗಿ 2010ರಲ್ಲಿ ಕಡಗಂಚಿ ಬಳಿ ವಿಶಾಲ ವಾದ 654 ಎಕರೆ ಭೂಮಿಯಲ್ಲಿ ವಿವಿ ಸ್ಥಾಪಿಸಲು ಭೂಮಿ ಪೂಜೆ ನೆರವೇರಿಸಲಾಯಿತು.

2015, ಡಿ.22ರಂದು ನಡೆದಿದ್ದ ವಿವಿ 2ನೇ ಘಟಿ ಕೋತ್ಸವಕ್ಕೆ ಅಂದಿನ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಆಗಮಿಸಿ ಘಟಿಕೋತ್ಸವ ಭಾಷಣ ಮಾಡಿದ್ದರು. 2012ರ ಜನವರಿಯಲ್ಲಿ ಪ್ರಥಮ ಘಟಿಕೋತ್ಸವ ನಡೆದ ನಂತರ, 2ನೇ ಘಟಿಕೋತ್ಸವ 3 ವರ್ಷಗಳ ನಂತರ 2015ರಲ್ಲಿ ನಡೆಯಿತು. 2019, ಫೆ.28ರಂದು 4ನೇ ಘಟಿ ಕೋತ್ಸವ ನಡೆದಿತ್ತು. ಈಗ 5ನೇ ಘಟಿಕೋತ್ಸವ ನಡೆಯಲಿದೆ.

ಕುಲಪತಿಗಳ ನಿವೃತ್ತಿ: ಕಳೆದ 5 ವರ್ಷಗಳಿಂದ ಕೇಂದ್ರೀಯ ವಿವಿ ಕುಲಪತಿಗಳಾಗಿರುವ ಪ್ರೊ.ಎಚ್‌.ಎಂ. ಮಹೇಶ್ವರಯ್ಯ ಬರುವ ಏಪ್ರಿಲ್‌ನಲ್ಲಿ ನಿವೃತ್ತಿ ಯಾಗುತ್ತಿದ್ದಾರೆ. ಮಹೇಶ್ವರಯ್ಯ ಕುಲಪತಿಗಳಾಗಿ ಬಂದ ಮೇಲೆ ಶೈಕ್ಷಣಿಕ ಸುಧಾರಣೆಗೆ ಹಲವಾರು ಕ್ರಮ ಕೈಗೊಂಡಿದ್ದಾರೆ. ಕಳೆದ ವರ್ಷ ಐವರು ಗಣ್ಯರಿಗೆ ಗೌರವ ಡಾಕ್ಟರೇಟ್‌ ನೀಡಿರುವುದು ಮೆಚ್ಚುಗೆಗೆ ಪಾತ್ರವಾಗಿತ್ತು.

Advertisement

ಗೌರವ ಡಾಕ್ಟರೇಟ್‌ಗೆ ಭಾಜನರಾದವರು: ಇದುವರೆಗೆ ನಡೆದಿರುವ ನಾಲ್ಕು ಘಟಿಕೋತ್ಸವಗಳ ಪೈಕಿ 2 ಘಟಿಕೋತ್ಸವಗಳಲ್ಲಿ ಗೌರವ ಡಾಕ್ಟರೇಟ್‌ ನೀಡಿದರೆ ಉಳಿದೆರಡು ಅಂದರೆ ಮೊದಲ ಸಲ 3 ಹಾಗೂ ತದನಂತರ ಐವರು ಸೇರಿ ಒಟ್ಟಾರೆ 8 ಗಣ್ಯರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗಿದೆ. 2012ರಲ್ಲಿ ನಡೆದಿದ್ದ ಪ್ರಥಮ ಘಟಿಕೋತ್ಸವದಲ್ಲಿ ಡಾ.ಯು.ಆರ್‌.ಅನಂತಮೂರ್ತಿ, ನಂದನ ನಿಲೇಕಣಿ ಹಾಗೂ ಗೋವರ್ಧನ ಮೇಹ್ತಾ ಅವರಿಗೆ ನೀಡಲಾಗಿತ್ತು.

2018ರ ಜುಲೈನಲ್ಲಿ ನಡೆದ 2ನೇ ಘಟಿಕೋತ್ಸವದಲ್ಲಿ ನಾಡೋಜ, ಖ್ಯಾತ ಕಲಾವಿದ ಡಾ.ಜೆ.ಎಸ್‌. ಖಂಡೇರಾವ್‌, ಚಿಂತಕ ಡಾ.ಸಿದ್ಧಲಿಂಗಯ್ಯ, ಕ್ಷಿಪಣಿ ಮಹಿಳೆ ಡಾ.ಟೆಸ್ಟಿ ಥಾಮಸ್‌, ಪ್ರಸಿದ್ಧ ಭೌತ ವಿಜ್ಞಾನಿ ಡಾ.ಬಾಲಸುಬ್ರಹ್ಮಣ್ಯಂ ಅಯ್ಯರ್‌, ವಿಮರ್ಶಕ ಡಾ.ಎಂ.ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗಿತ್ತು. 3ನೇ ಹಾಗೂ ಕಳೆದ ವರ್ಷ ನಡೆದ 4ನೇ ಘಟಿಕೋತ್ಸವದಲ್ಲಿ ಯಾರೊಬ್ಬರಿಗೂ ಗೌರವ ಡಾಕ್ಟರೇಟ್‌ ನೀಡಿರಲಿಲ್ಲ.

* ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next