Advertisement

ಕಾಗವಾಡದಲ್ಲಿ 2 ಸಾವಿರ ಕೋಳಿ ಜೀವಂತ ಸಮಾಧಿ

11:26 PM Mar 20, 2020 | Lakshmi GovindaRaj |

ಕಾಗವಾಡ: ಕೊರೊನಾ ಭೀತಿಯಿಂದ ಕುಕ್ಕುಟೋದ್ಯಮಕ್ಕೆ ಭಾರೀ ನಷ್ಟವಾಗುತ್ತಿರುವುದರಿಂದ ತಾಲೂಕಿನ ಶೇಡಬಾಳ ಕಲ್ಲಾಳ್‌ ಮಜರೆ ಗ್ರಾಮದ ರೈತ ಜಗ ದೀಶ ಮಲ್ಲಪ್ಪ ಮರಾಠೆ ಎಂಬುವರು ತಾವು ಸಾಕಿದ್ದ 2 ಸಾವಿರ ಕೋಳಿಗಳನ್ನು ಜೆಸಿಬಿ ಮೂಲಕ ನೆಲದಲ್ಲಿ ಗುಂಡಿ ತೆಗೆದು ಮುಚ್ಚಿ ಹಾಕಿದ್ದಾರೆ. ಕೋಳಿಗಳಿಗೆ ಬೇಡಿಕೆ ಕುಸಿದಿದ್ದು, ಒಂದು ಕೆಜಿ ಕೋಳಿಗೆ 10 ರೂ.ಗೆ ಇಳಿದಿದೆ.

Advertisement

ಇನ್ನೊಂಡೆದೆ, ಪ್ರತಿ ಕೆಜಿ ಕೋಳಿ ಆಹಾರದ ಬೆಲೆ 30 ರೂ. ಇದೆ. ಒಂದು ಕೆಜಿ ಮಾಂಸ ತಯಾರಾಗಲು 2 ಕೆಜಿ ಆಹಾರ ನೀಡಬೇಕು. ಇದರಿಂದ ಪ್ರತಿ ಕೋಳಿಯಿಂದ 40ರೂ.ನಷ್ಟವಾಗುತ್ತಿದೆ. ಕೋಳಿ ಖರೀದಿಸುವರು ಇಲ್ಲದ ಕಾರಣ ಆಹಾರಕ್ಕೆ ದುಡ್ಡು ಹೊಂದಿಸುವುದು ಕಷ್ಟವಾಗುತ್ತಿದೆ. ಹಾಗಾಗಿ, ಕೋಳಿಗಳನ್ನು ಮಣ್ಣಿನಲ್ಲಿ ಮುಚ್ಚುತ್ತಿದ್ದೇವೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next