Advertisement

ನಮ್ಮನ್ನು ವಲಸಿಗರೆಂದು ಪರಿಗಣಿಸಿ; ಶೋಪಿಯಾನ್‌ ತೊರೆದ 13 ಪಂಡಿತ ಸಮುದಾಯ ಕುಟುಂಬದವರ ಮನವಿ

06:16 PM Nov 01, 2022 | Team Udayavani |

ಶ್ರೀನಗರ: “ನಮ್ಮನ್ನು ವಲಸಿಗರು ಎಂದು ಪರಿಗಣಿಸಿ’ ಹೀಗೆಂದು ಕಾಶ್ಮೀರ ಪಂಡಿತ ಸಮುದಾಯಕ್ಕೆ ಸೇರಿದ 13 ಕುಟುಂಬಗಳು ಅರ್ಜಿ ಸಲ್ಲಿಸಿವೆ. ಜಮ್ಮುವಿನಲ್ಲಿ ವಲಸಿಗರಿರಾಗಿ ಇರುವ ಪರಿಹಾರ ಮತ್ತು ಪುನರ್ವಸತಿ ಆಯುಕ್ತರಿಗೆ ಈ ಬಗ್ಗೆ ಅವರು ಅರಿಕೆ ಮಾಡಿದ್ದಾರೆ.

Advertisement

ಅ.15ರಂದು ದಕ್ಷಿಣ ಕಾಶ್ಮೀರದ ಶೋಪಿಯಾನ್‌ನ ಚೌಧರಿ ಗುಂದ್‌ನಲ್ಲಿ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ಪುರನ್‌ ಕ್ರಿಶನ್‌ ಭಟ್‌ ಅವರನ್ನು ಉಗ್ರರು ಹತ್ಯೆ ಮಾಡಿದ್ದರು. ನಂತರ ಗ್ರಾಮದ 13 ಕುಟುಂಬಗಳು ಕಾಶ್ಮೀರ ಕಣಿವೆ ತೊರೆದಿದ್ದರು.

1989ರಿಂದ ಇಲ್ಲಿಯವರೆಗೆ ಅಂದಾಜು 808 ಕಾಶ್ಮೀರಿ ಪಂಡಿತ್‌ ಕುಟುಂಬಗಳು ಕಾಶ್ಮೀರ ಕಣಿವೆ ತೊರೆದಿವೆ. 2020ರ ಸಂಸದೀಯ ಸಮಿತಿಯ ವರದಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ 64,827 ನೋಂದಾಯಿತ ವಲಸಿಗ ಕುಟುಂಬಗಳಿವೆ.

ಈ ಪೈಕಿ 60,489 ಹಿಂದೂ, 2,609 ಮುಸ್ಲಿಂ, 1,729 ಸಿಖ್‌ ಕುಟುಂಬಗಳು ಸೇರಿವೆ. ಕೇಂದ್ರ ಸರ್ಕಾರವು ಈ ಕುಟುಂಬಗಳಿಗೆ ಮಾಸಿಕ 10,000 ರೂ. ನಗದು ಮಾಸಾಶನ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next