Advertisement

100 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾರ್ಯ

07:40 PM Sep 18, 2020 | Suhan S |

ಹೊಳಲ್ಕೆರೆ: ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ತಾಲೂಕಿನಲ್ಲಿ 100 ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ. ಚಂದ್ರಪ್ಪ ಹೇಳಿದರು.

Advertisement

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ 70 ಮನೆಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರುಮಾತನಾಡಿದರು. ಭಾರತವನ್ನು ವಿಶ್ವದ ಹಿರಿಯಣ್ಣನ ಸ್ಥಾನಕ್ಕೇರಿಸಿದ ಪ್ರಧಾನಿ ಮೋದಿಯವರು ಪ್ರಪಂಚದ ಸಮರ್ಥ ನಾಯಕರಾಗಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರಪಂಚಕ್ಕೆ ಸಾರಿ ಭಾರತವನ್ನು ಆಗ್ರಗಣ್ಯ ಸ್ಥಾನಕ್ಕೇರಿಸಿದ ಮಹಾನ್‌ ಸಾಧಕರು. ರಾಜನೀತಿ ತಜ್ಞರಾಗಿರುವ ಮೋದಿಯವರು ಸಾಮಾನ್ಯ ವ್ಯಕ್ತಿಯಲ್ಲ, ಅವರೊಂದು ಶಕ್ತಿಯಾಗಿದ್ದಾರೆ. ದಕ್ಷ ಆಡಳಿತಗಾರ,ಸಮರ್ಥ ನಾಯಕ, ಸ್ಪಂದನ ಶೀಲ ಹಾಗೂ ವಿಶೇಷ ವ್ಯಕ್ತಿತ್ವ ಹೊಂದಿರುವ ದಣಿವರಿಯದ ನಾಯಕ ಮೋದಿಯವರು ದೇಶವನ್ನು ಪ್ರಗತಿಪರ ಚಿಂತನೆ, ವಿಶಿಷ್ಟ ರಾಜನೀತಿ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ಹೆಗ್ಗಳಿಕೆ ಹೊಂದಿದ್ದಾರೆ ಎಂದರು.

ಗಾಂಧಿ  ಜಯಂತಿ ತನಕ ಪ್ರತಿ ನಿತ್ಯ ಒಂದಿಲ್ಲೊಂದು ಕಾರ್ಯಕ್ರಮಗಳು ನಡೆಯಲಿವೆ ಎಂದ ಶಾಸಕರು, ಆಕಾರ್ಯಕ್ರಮಗಳ ವಿವರ ನೀಡಿದರು.ಬಿಜೆಪಿ ಮೋರ್ಚಾ ಅಧ್ಯಕ್ಷ ಎಂ.ಬಿ. ಸಿದ್ದೇಶ್‌, ಪಪಂ ಸದಸ್ಯರಾದ ಎಚ್‌.ಆರ್‌. ನಾಗರತ್ನ ವೇದಮೂರ್ತಿ, ಕೆ.ಸಿ. ರಮೇಶ್‌, ಪಿ.ಆರ್‌. ಮಲ್ಲಿಕಾರ್ಜುನ, ಡಿ.ಎಸ್‌. ವಿಜಯ್‌, ಪಿ.ಎಚ್‌. ಮುರುಗೇಶ್‌, ಅಶೋಕ್‌, ಮುಖಂಡರಾದ ಗುಂಜಿಗನೂರು ಇಂದ್ರಪ್ಪ, ಕೆ.ಆರ್‌. ರಾಜಪ್ಪ, ಎಸ್‌.ಬಿ. ಶಿವರುದ್ರಪ್ಪ, ಬಂಗಿ ಲೋಕೇಶ್‌, ಕೆ.ಎಸ್‌. ಸಿದ್ದಪ್ಪ, ಇಂಜಿನಿಯರ್‌ ವೀರೇಶ್‌ ಬಾಬು, ನಗರಾಧ್ಯಕ್ಷಪ್ರವೀಣ್‌ , ಬಸವರಾಜ್‌, ವಕೀಲರಾದಫಣಿಯಪ್ಪ, ಪ್ರಶಾಂತ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next