Advertisement

ಝೀಬ್ರಾ ಕ್ರಾಸಿಂಗ್‌ ಅರಿವು ಕಾರ್ಯಕ್ರಮ

11:54 AM Oct 16, 2017 | Team Udayavani |

ಬಲ್ಮಠ : ಪಾದಚಾರಿಗಳು ರಸ್ತೆಗಳಲ್ಲಿ ನಿಗದಿಪಡಿಸಿದ ಝೀಬ್ರಾ ಕ್ರಾಸಿಂಗ್‌ನಲ್ಲಿ ರಸ್ತೆಗಳನ್ನು ದಾಟುವ ಬಗ್ಗೆ ಅರಿವು ಮೂಡಿಸುವ ಸ್ವತ್ಛ ಸಂದೇಶ್‌ ಕಾರ್ಯಕ್ರಮ ವಿಎಸ್‌ಒ ಮಂಗಳೂರು ಹಾಗೂ ಮಂಗಳೂರು ಕೆಎಂಸಿಯ ವಿಧಿ ವಿಜ್ಞಾನ ವಿಭಾಗದ ಸಹಯೋಗದಲ್ಲಿ ಜರಗಿತು.

Advertisement

ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯ ನಿರೀಕ್ಷಕ ಸುರೇಶ್‌ ಕುಮಾರ್‌ ಹಾಗೂ ಮಂಗಳೂರು ಕೆಎಂಸಿ ಡೀನ್‌ ಡಾ | ವೆಂಕಟ್ರಾಯ ಪ್ರಭು ಅವರು ಅಂಬೇಡ್ಕರ್‌ ವೃತ್ತದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆಎಂಸಿಯ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ|ಬಿ.ಸುರೇಶ್‌ ಶೆಟ್ಟಿ, ವಿಎಸ್‌ಒ ಮಂಗಳೂರು ಸಂಚಾಲಕ ಡಾ|ರಮೇಶ್‌ ಹೊಳ್ಳ ಉಪಸ್ಥಿತರಿದ್ದರು.

ಸ್ವಯಂಸೇವಕರಿಂದ ಅಂಬೇಡ್ಕರ್‌ ವೃತ್ತ ಹಾಗೂ ಲಾಲ್‌ಬಾಗ್‌ ವೃತ್ತದಲ್ಲಿ ಝೀಬ್ರಾ ಕ್ರಾಸಿಂಗ್‌ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮ ಜರಗಿತು. ಭಿತ್ತಿಪತ್ರ ಪ್ರದರ್ಶನ, ಕರಪತ್ರ ವಿತರಣೆ ಹಾಗೂ ಏಕಪಾತ್ರಾಭಿನಯ ಮುಂತಾದವುಗಳನ್ನು ಹಮ್ಮಿಕೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next