Advertisement

FIR: ಪಿಜಿಯಲ್ಲಿ ಯುವತಿ ಹತ್ಯೆ; ಮಾಲಿಕರ ವಿರುದ್ಧ ಪ್ರಕರಣ

11:24 AM Aug 18, 2024 | Team Udayavani |

ಬೆಂಗಳೂರು: ಪೇಯಿಂಗ್‌ ಗೆಸ್ಟ್‌ನಲ್ಲಿ (ಪಿಜಿ) ಜುಲೈ 23ರಂದು ನಡೆದಿದ್ದ ಯುವತಿ ಕೊಲೆ ಪ್ರಕರಣದ ಸಂಬಂಧ ಪಿ.ಜಿ.ಮಾಲಿಕರ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

Advertisement

ಸೂಕ್ತ ಭದ್ರತೆ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳದೆ ಯುವತಿಯ ಜೀವ ಹಾನಿಗೆ ಕಾರಣವಾದ ಆರೋಪದ ಹಿನ್ನೆಲೆಯಲ್ಲಿ ಪಿ.ಜಿ.ನಡೆಸುತ್ತಿದ್ದ ಶ್ಯಾಮಸುಂದರ್‌ ರೆಡ್ಡಿ ಹಾಗೂ ಕಟ್ಟಡದ ಮಾಲಿಕ ವಿಜಯ್‌ ಕುಮಾರ್‌ ವಿರುದ್ಧ ಪ್ರಕರಣ ದಾಖ ಲಾಗಿದೆ.

ಜುಲೈ 23ರ ರಾತ್ರಿ 11ಗಂಟೆಯಾದರೂ ಪಿ.ಜಿ. ಗೇಟ್‌ ತೆರೆದೇ ಇತ್ತು. ಭದ್ರತಾ ಸಿಬ್ಬಂದಿಯೂ ಇರಲಿಲ್ಲ. ಇದ ರಿಂದಾಗಿ ಆರೋಪಿ ಅಭಿಷೇಕ್‌ ಸುಲಭವಾಗಿ ಪಿಜಿಯೊಳಗೆ ಪ್ರವೇಶಿಸಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಮಧ್ಯಪ್ರದೇಶ ಮೂಲದ ಕೃತಿ ಎಂಬಾಕೆಯನ್ನು ಹತ್ಯೆ ಮಾಡಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next