Advertisement

ಬೇಸಿಗೆಯಲ್ಲಿ ನೀಗದ ಜನರ ಜಲದಾಹ!

03:05 PM Apr 24, 2021 | Team Udayavani |

ದೇವದುರ್ಗ: ತಾಲೂಕು ಕೃಷ್ಣಾ ನದಿ ದಂಡೆಗೆಹೊಂದಿಕೊಂಡಿದ್ದರೂ ಬೇಸಿಗೆಯಲ್ಲಿ ಜನ-ಜಾನುವಾರು ಜಲದಾಹಕ್ಕೆ ಮುಕ್ತಿ ಸಿಕ್ಕಿಲ್ಲ. ಇನ್ನೊಂದೆಡೆನಾರಾಯಣಪುರ ಬಲದಂಡೆ ನಾಲೆ ವರ್ಷದ8 ತಿಂಗಳು ಹರಿದರೂ ಕುಡಿಯುವ ನೀರಿಗೆ ತತ್ವಾರತಪ್ಪಿಲ್ಲ.

Advertisement

ಬೇಸಿಗೆ ಬಂದರೆ ಸಾಕು ತಾಲೂಕಿನ 40ಕ್ಕೂಹೆಚ್ಚು ಹಳ್ಳಿ, ದೊಡ್ಡಿ, ತಾಂಡಾಗಳಲ್ಲಿ ಜೀವಜಲಕ್ಕಾಗಿ ಹಾಹಾಕಾರ ಎದುರಾಗುತ್ತಿದೆ. ಎನ್‌ಆರ್‌ಬಿ ನಾಲೆ ಕೊನೆ ಭಾಗ, ಗುಡ್ಡಗಾಡು ಪ್ರದೇಶ,ರಸ್ತೆ ಸಂಚಾರವಿಲ್ಲದ ತಾಂಡಾ, ದೊಡ್ಡಿಗಳಲ್ಲಿನೀರಿನ ಅಭಾವ ದಿನೇ ದಿನೇ ಹೆಚ್ಚಾಗುತ್ತಿದೆ.

ಜನರ ದಾಹ ನೀಗಿಸಲು ತಾಪಂ ಹಾಗೂ ಜಿಪಂಹತ್ತಾರು ಯೋಜನೆಗಳನ್ನು ಜಾರಿಗೆ ತಂದರೂಜನರ ದಾಹ ನೀಗುತ್ತಿಲ್ಲ. ನೀರಿನಂತೆ ಅನುದಾನಖರ್ಚಾದರೂ ಶಾಶ್ವತ ಪರಿಹಾರ ಎನ್ನುವುದುಮರೀಚಿಕೆಯಾಗಿದೆ.ಬಹುಗ್ರಾಮ ಯೋಜನೆ, ಜಲ ನಿರ್ಮಾಲಯೋಜನೆ, ಶುದ್ಧೀಕರಣ ಯೋಜನೆ, ರಾಷ್ಟ್ರೀಯಗ್ರಾಮೀಣ ಕುಡಿವ ನೀರಿನ ಯೋಜನೆ ಸೇರಿವಿವಿಧ ಯೋಜನೆಗಳನ್ನು ಗ್ರಾಪಂ ವ್ಯಾಪ್ತಿಯಲ್ಲಿಜಾರಿಗೊಳಿಸಲಾಗಿದೆ.

ಯೋಜನೆಗೆ ಕೋಟ್ಯಂತರಅನುದಾನ ಖರ್ಚಾದರೂ ನಿರ್ವಹಣೆ ಕೊರತೆಯಿಂದಹಳ್ಳಹಿಡಿದಿವೆ. ತಾಲೂಕಿನ ಸೋಮನಮರಡಿ,ಹೇಮನಾಳ, ಕೋಳ್ಳೂರು, ಊಟಿ, ಸಲಿಕ್ಯಾಪುರ,ಚಿಕ್ಕಬೂದೂರು, ಜೇರಬಂಡಿ, ಹೊಸೂರು ಸಿದ್ದಾಪುರ,ವಂದಲಿ ಸೇರಿ ತಾಂಡಾ, ದೊಡ್ಡಿಗಳಲ್ಲಿ ಕುಡಿವನೀರಿನ ಬವಣೆಯಿದೆ. ಬೇಸಿಗೆ ಬಂದರೆ ಖಾಸಗಿಬೋರ್‌ವೆಲ್‌, ಹಳ್ಳಕೊಳ್ಳ ಅಲೆಯುವಂತಸ್ಥಿತಿಯಿದೆ.ಕೃಷ್ಣಾ ನದಿಯಿಂದಪಟ್ಟಣಕ್ಕೆ 24×7 ನೀರುಒದಗಿಸಲು ಯೋಜನೆಜಾರಿಗೊಳಿಸಿದ್ದರೂ, ಅದರ ಉದ್ದೇಶಸಕರಾತ್ಮಕವಾಗಿ ಈಡೇರಿಲ್ಲ.

ಕೆಲ ವಾರ್ಡ್‌ ಗಳಿಗೆದಿನದಲ್ಲಿ 10-20 ನಿಮಿಷನೀರು ಬಿಟ್ಟರೆ, ಕೆಲವುಕಡೆ ಎರಡೂ ಮೂರುದಿನಕ್ಕೊಮ್ಮೆ ನೀರುಪೂರೈಸಲಾಗುತ್ತಿದೆ.ಹೊಸ ಬಡವಣೆಗಳಿಗೆಕುಡಿವ ನೀರಿನಸೌಲಭ್ಯವೇ ಕಲ್ಪಿಸಿಲ್ಲ. ಪ್ರತಿಮನೆಗೆ ನಲ್ಲಿ, ವಾಟರ್‌ಮೀಟರ್‌ ಅಳವಡಿಕೆಕನಸಾಗಿಯೇ ಉಳಿದಿದೆ.ವಿಷಪೂರಿತ ನೀರಿನಿಂದ ಅನಾರೋಗ್ಯ:ಪರಿಸರ ಅಸಮತೋಲನದಿಂದದಿನೇ-ದಿನೇ ಬೋರ್‌ವೆಲ್‌ ನೀರು ವಿಷವಾಗುತ್ತಿದೆ.ವಂದಲಿ, ಊಟಿ, ಸುಣ್ಣದಕಲ್‌, ಬಿ.ಗಣೇಕಲ್‌,ಸೋಮನಮರಡಿ, ಎಚ್‌.ಸಿದ್ದಾಪುರ ಸೇರಿ20ಕ್ಕೂ ಹೆಚ್ಚು ಗ್ರಾಮಗಳ ಬೋರ್‌ವೆಲ್‌ನಲ್ಲಿಆರ್ಶೇನಿಕ್‌ ಹಾಗೂ ಪ್ಲೋರೈಡ್‌ ನೀರಿನ ಅಂಶಹೆಚ್ಚುತ್ತಿದೆ.

Advertisement

ಈ ಬಗ್ಗೆ ಅ ಧಿಕಾರಿಗಳು ಸರ್ಕಾರಕ್ಕೆಮಾಹಿತಿ ನೀಡಿದ್ದು, ಇದರ ನಿರ್ವಹಣೆಗಾಗಿ ಶುದ್ಧಕುಡಿವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ.ಹಲವು ಕಡೆ ಯೋಜನೆ ನನೆಗುದಿಗೆಬಿದ್ದಿದ್ದರೆ, ಕೆಲಕಡೆ ನಿರ್ವಹಣೆ ಕೊರತೆಯಿಂದಮೂಲೆ ಸೇರಿವೆ.

ಬೆರಳೆಣಿಕೆ ಪ್ಲಾಂಟ್‌ಗಳು ಮಾತ್ರಕಾರ್ಯನಿರ್ವಹಿಸುತ್ತಿವೆ. ಜನರು ಅನಿವಾರ್ಯವಾಗಿಅರ್ಶೇನಿಕ ಹಾಗೂ ಪ್ಲೋರೈಡ್‌ಯುಕ್ತ ನೀರುಕುಡಿಯುತ್ತಿದ್ದಾರೆ. ಮೊಣಕಾಲು ನೋವು, ಕೀಲುಬೇನೆ, ಕಂದು ಹಲ್ಲಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಹ‌ಳ್ಳಹಿಡಿದ ಯೋಜನೆಗಳು

ಕುಡಿವ ನೀರಿನ ಬವಣೆ ನೀಗಿಸಲು ತಾಲೂಕಿನಲ್ಲಿ 30 ಜಲ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ.ಅದರಲ್ಲಿ 17 ಪ್ಲಾಂಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, 13 ಘಟಕಗಳು ನಿರ್ವಹಣೆ ಕೊರತೆಯಿಂದನಿರುಪಯುಕ್ತವಾಗಿವೆ.

ಸುಮಾರು 20ಕ್ಕೂ ಹೆಚ್ಚು ಪ್ಲಾಂಟ್‌ಗಳು ಅರೆಬರೆಯಾಗಿವೆ. ಹೊಸ ಪ್ಲಾಂಟ್‌ಗಳಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದರೂ ಸಂಬಂ ಧಿಸಿದ ಇಲಾಖೆಯಿಂದ ಅನುಮೋದನೆ ದೊರತಿಲ್ಲ.ಆಲ್ಕೋಡ್‌, ಭೂಮನಗುಂಡ, ಕುರ್ಕಿಹಳ್ಳಿ, ಮಾನಸಗಲ್‌, ನೀಲವಂಜಿ, ಸೂಗರಾಳ, ಗಣಜಲಿಗ್ರಾಮಗಳಲ್ಲಿ ಆರ್‌ಒ ಪ್ಲಾಂಟ್‌ ನಿರುಪಯುಕ್ತವಾಗಿವೆ. ಕೊತ್ತದೊಡ್ಡಿ ಗ್ರಾಪಂನ ಹಳ್ಳಿಗಳಿಗೆ ಶಾಶ್ವತಕುಡಿವ ನೀರು ಕಲ್ಪಿಸಲು 4.60 ಕೋಟಿ ರೂ. ವೆಚ್ಚದ ಯೋಜನೆ ಹಳ್ಳ ಹಿಡಿದಿದೆ. ಇದರಿಂದಯಮನೂರು, ಎಲ್‌.ದೊಡ್ಡಿ, ಲಿಂಗನದೊಡ್ಡಿ, ಮಲ್ಲೇನಾಯಕದೊಡ್ಡಿ, ಕರಡೋಣಿಯಲ್ಲಿನೀರಿನ ಸಮಸ್ಯೆಯಿದೆ.

ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next