Advertisement

ಸೆಪ್ಟೆಂಬರ್‍ನಲ್ಲಿ ಭಟ್ರು ಜೊತೆ ಶಿವಣ್ಣನ ಚಿತ್ರ

11:14 AM Jun 26, 2018 | |

ಕನ್ನಡ ಚಿತ್ರರಂಗವು ಮತ್ತು ಕನ್ನಡ ಪ್ರೇಕ್ಷಕರು ಬಹಳ ವರ್ಷಗಳಿಂದ ಈ ಕಾಂಬಿನೇಷನ್‍ನ ಚಿತ್ರಕ್ಕೆ ಕಾಯುತ್ತಲೇ ಇತ್ತು. ಆದರೆ, ಇದಕ್ಕೂ ಮುನ್ನ ಶಿವರಾಜಕುಮಾರ್ ಅಭಿನಯದಲ್ಲಿ ಯೋಗರಾಜ್ ಭಟ್ ಒಂದು ಚಿತ್ರ ನಿರ್ದೇಶಿಸುವುದಕ್ಕೆ ಕಾರಣಾಂತರಗಳಿಂದ ಸಾಧ್ಯವಾಗಲೇ ಇಲ್ಲ.

Advertisement

ಈಗ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಸೆಪ್ಟೆಂಬರ್‍ನಲ್ಲಿ ಶಿವರಾಜಕುಮಾರ್ ಅಭಿನಯದ ಚಿತ್ರವೊಂದನ್ನು ಯೋಗರಾಜ್ ಭಟ್ ನಿರ್ದೇಶಿಸಲಿದ್ದಾರೆ. ಸೋಮವಾರ ಸಂಜೆ ಈ ಕುರಿತು ಮಾತುಕತೆಯಾಗಿದ್ದು, ಯೋಗರಾಜ್ ಭಟ್ ನಿರ್ದೇಶನದಲ್ಲಿ ಶಿವರಾಜಕುಮಾರ್ ನಟಿಸುವುದು ಪಕ್ಕಾ ಆಗಿದೆ. ಈ ಚಿತ್ರವನ್ನು ರಾಶಿ ಫಿಲಂಸ್‍ನ ಭಾಸ್ಕರ್ ನಿರ್ಮಿಸುತ್ತಿದ್ದಾರೆ.

ಭಾಸ್ಕರ್ ಈ ಹಿಂದೆ ಶಿವರಾಜಕುಮಾರ್ ಅಭಿನಯದ “ಅಂದರ್ ಬಾಹರ್’ ಚಿತ್ರವನ್ನು ನಿರ್ಮಿಸಿದ್ದು, ಈಗ ಧನಂಜಯ್ ಅಭಿನಯದ “ಭೈರವ ಗೀತ’ ಚಿತ್ರವನ್ನು ನಿರ್ಮಿಸುತ್ತಿರುವ ಅವರು ಯೋಗರಾಜ್ ಭಟ್ ನಿರ್ದೇಶನದ, ಶಿವರಾಜಕುಮಾರ್ ಅಭಿನಯದ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಕಲಾವಿದರು, ತಂತ್ರಜ್ಞರು, ಹೆಸರು ಎಲ್ಲವೂ ಮುಂದಿನ ದಿನಗಳಲ್ಲಿ ಪಕ್ಕಾ ಆಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next