Advertisement

ಯತ್ನಾಳ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳಲ್ಲ

04:47 PM Jan 31, 2021 | Team Udayavani |

ಕಾರವಾರ: ಯುಗಾದಿ ನಂತರ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂಬ ಶಾಸಕ ಬಸವನಗೌಡ ಯತ್ನಾಳ್‌ ಹೇಳಿಕೆ ಯನ್ನು ಗಂಭೀರವಾಗಿ ಪರಿಗಣಿಸಲ್ಲ.  ಯಾರೋ ಒಬ್ಬರು ಹೇಳಿಕೆ ಕೊಟ್ಟರೆ ಅದಕ್ಕೆ ಯಾವುದೇ ಮಹತ್ವ ಇಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಸರಿ ಸುಮಾರು 10 ಕೋಟಿಗೂ ಅಧಿಕ ಸದಸ್ಯರನ್ನು ಹೊಂ ದಿರುವ ಅತೀ ದೊಡ್ಡ ಪಕ್ಷ ಬಿಜೆಪಿಯಾಗಿದೆ. ಗ್ರಾಪಂ ಚುನಾವಣೆ ಮುಗಿಯುತ್ತಿದ್ದಂತೆ ಸಿಎಂ ಬದಲಾಗ್ತಾರೆ ಎಂದು ಸಿದ್ಧರಾಮಯ್ಯ ಹೇಳಿದ್ದರು.

ಈವಾಗ ಇನ್ಯಾವುದೋ ಸಮಯ ಹೇಳ್ತಾರೆ. ಹೀಗೆ ಅವರು ಹೇಳಿದಂತೆ ಒಂದೊಂದು ಹಬ್ಬಕ್ಕೆ ಒಂದೊಂದು ಮುಖ್ಯಮಂತ್ರಿ ಬದಲಾಯಿಸಿದ್ದರೆ ಇಷ್ಟರ ವರೆಗೆ 25 ಬಾರಿ ಮುಖ್ಯಮಂತ್ರಿ ಬದಲಾವಣೆ ಆಗಬೇಕಿತ್ತು ಎಂದು ತಿಳಿಸಿದರು.

ಇದನ್ನೂ ಓದಿ:ಗೋಹತ್ಯೆ ನಿಷೇಧ ಕಾಯ್ದೆ ಜಾಗೃತಿ ಮೂಡಿಸಿ

ಸಿದ್ದರಾಮಯ್ಯ ಹೇಳಿಕೆ ನೀಡಿ ದಂತೆ ಇದೀಗ ಯತ್ನಾಳ್‌ ಕೂಡಾ ಹೇಳಿಕೆ ಕೊಡ್ತಿ ದ್ದಾರೆ. ಅದ್ಯಾವುದನ್ನೂ ನಾವು ಗಂಭೀರ ವಾಗಿ ತೆಗೆದುಕೊಂಡಿಲ್ಲ. ಯತ್ನಾಳ್‌ ನನಗೆ ಆತ್ಮೀಯ ಸ್ನೇಹಿತ, ಪ್ರಖರ ಹಿಂದುತ್ವವಾದಿ ಎನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ ಪಕ್ಷದ ಶಿಸ್ತು ಮೀರಿ ಅವರೇ ಹೇಳಿಕೆ ನೀಡುವುದನ್ನು ಪಕ್ಷ ಯಾವತ್ತೂ ಕ್ಷಮಿಸಲ್ಲ. ಈಗಾಗಲೇ ರಾಜ್ಯಸಮಿತಿಯಿಂದ ಕೇಂದ್ರದ ಶಿಸ್ತು ಸಮಿ ತಿಗೆ ದೂರು ಕಳುಹಿಸಿದ್ದು  ಅವರೇ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next