Advertisement

“ಯಕ್ಷಗಾನದ ಮೂಲ ಪರಂಪರೆಗೆ ಧಕ್ಕೆಯಾಗದಿರಲಿ’

04:05 PM Feb 28, 2017 | Team Udayavani |

ಕಾಸರಗೋಡು: ಯಕ್ಷಗಾನ ಕ್ಷೇತ್ರದ ಮಹಾನ್‌ ಸಾಧಕರಿಂದ ಅತ್ಯಂತ ಹೆಚ್ಚು ಪ್ರಸಿದ್ಧವಾಗಿರುವ ಪೆರ್ಲ, ಇದೀಗ ತೆಂಕುತಿಟ್ಟಿನ ಪ್ರಸ್ತುತ ಸಂದರ್ಭದ ಏಕೈಕ ನಾಟ್ಯ ತರಬೇತಿ ಕೇಂದ್ರವಾಗಿ ಗುರುತಿಸಲ್ಪಟ್ಟಿರುವುದು ಈ ಮಣ್ಣಿನ ವಿಶೇಷತೆ. ಸಂಕಷ್ಟಮಯ ಸವಾಲುಗಳನ್ನು ಎದುರಿಸಿಯೂ ಪ್ರಬುದ್ಧ ಕೇಂದ್ರವಾಗಿ ಬೆಳೆಯುತ್ತಿರುವ ಪಡ್ರೆ ಚಂದು ಸ್ಮಾರಕ ನಾಟ್ಯ ಕೇಂದ್ರ ಯಕ್ಷ ಗಾನ ಕ್ಷೇತ್ರವನ್ನು ಉಳಿಸಿ ಬೆಳೆಸುವಲ್ಲಿ ಅಪೂರ್ವ ಕೊಡುಗೆಗಳನ್ನು ನೀಡುತ್ತಿ ರುವುದಕ್ಕೆ ಕಲಾಪೋಷಕರ, ಪ್ರೇಮಿ ಗಳ ಸಹೃದಯತೆಯ ಇನ್ನಷ್ಟು ಚೈತನ್ಯ ನೀಡ ಬೇಕಾಗಿದೆ ಎಂದು ಹಿರಿಯ ಯಕ್ಷಗಾನ ಪ್ರಸಾಧನ ಕಲಾವಿದ ದೇವಕಾನ ಕೃಷ್ಣ ಭಟ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಅವರು ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಹನ್ನೆರಡನೇ ವರ್ಷದ ವಾರ್ಷಿ ಕೋತ್ಸವವದ ಅಂಗವಾಗಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಜನಸಾಮಾನ್ಯರು ಕಟ್ಟಿ ಬೆಳೆಸಿದ ಸಂಸ್ಕೃತಿ ದ್ಯೋತಕವಾದ ಯಕ್ಷಗಾನ ಇಂದು ಸಮೃದ್ಧವಾಗಿ ಬೆಳೆಯುತ್ತಿದೆ.

ಗಡಿಗಳಾಚೆಗೂ ವಿಸ್ತರಿಸಿ ವಿದೇಶಿಯರನ್ನೂ ಆಕರ್ಷಿಸಿದೆ. ಆದರೆ ಮೂಲ ಪರಂಪರೆಗಳಿಗೆ ಧಕ್ಕೆಯಾಗದಂತೆ ನಿರ್ವಹಿಸುವ ಹೊಣೆ ಕಲಾವಿದರ ಮೇಲಿನ ಜವಾಬ್ದಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಸಮರ್ಥ ಗುರುಗಳಾದ ಸಬ್ಬಣಕೋಡಿ ರಾಮ ಭಟ್‌ ಅವರಂತವರ ಸ್ಪಷ್ಟ ನಿರ್ದೇಶನಗಳು ಕಲೆಯ ವಿಸ್ತರಣೆಗೆ ಅನುಕೂಲಕರವಾಗಿದೆಯೆಂದು ಅವರು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ  ವಿಭಾಗದ ಮುಖ್ಯಸ್ಥ ಡಾ| ಶ್ರೀಧರ ಎಚ್‌. ಜಿ. ಮಾತನಾಡಿ ಕರಾವಳಿಯಾದ್ಯಂತ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸಿ ಜನಜೀವನವನ್ನು ಪ್ರಭಾವಶಾಲಿಯಾಗಿ ಸಿದ ಏಕೈಕ ಕಲೆ ಯಕ್ಷಗಾನ. ಇಲ್ಲಿಯ ಜನರ ಜೀವನದ ಒಂದು ಭಾಗವೇ ಆಗಿದ್ದ ಕಾಲವಿತ್ತೆಂದು ನೆನಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next