Advertisement

Yadgir: ಸಿಡಿಲು ಬಡಿದು ಕುರಿಗಾಹಿ ಮೃತ್ಯು, 17 ಕುರಿಗಳು ಸಾವು

08:21 PM May 13, 2024 | Team Udayavani |

ಯಾದಗಿರಿ:ಜಿಲ್ಲೆಯಾದ್ಯಂತ ಭಾನುವಾರ ತಡರಾತ್ರಿ ಗುಡುಗು, ಸಿಡಿಲು ಸಹಿತ ಸುರಿದ ಅಕಾಲಿನ ಮಳೆಗೆ ಕುರಿಗಾಹಿ ಮೃತ ಪಟ್ಟಿದ್ದು, 17 ಕುರಿಗಳು ಬಲಿಯಾಗಿವೆ.

Advertisement

ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ಕುರಿಗಾಯಿ ಸೇರಿದಂತೆ 7 ಕುರಿಗಳು ಮೃತಪಟ್ಟಿವೆ. ಸಿಡಿಲಿಗೆ ಬಲಿಯಾದ ವ್ಯಕ್ತಿಯನ್ನು ಗೋವಿಂದಪ್ಪ (26)ಎಂದು ಗುರುತಿಸಲಾಗಿದೆ. ಕುರಿಹಟ್ಟಿಯಲ್ಲಿ ಒಟ್ಟು 200 ಕುರಿಗಳು ಇದ್ದವು ಎಂದು ಹೇಳಲಾಗಿದ್ದು ಈ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಡಗೇರಾ ತಾಲೂಕಿನ ಐಕೂರ ಗ್ರಾಮಾಂತರದಲ್ಲಿ ಸೊಮವಾರ ಬೆಳಗಿನ ಜಾವ ಸಿಡಿಲು ಬಡಿದು ಸಾಬಣ್ಣ ಮುಂಡರಗಿ ಇವರಿಗೆ ಸೇರಿದ 10 ಕುರಿಗಳು ಸಾವನಪ್ಪಿವೆ. ತಮ್ಮ ಜಮೀನಿನಲ್ಲಿರುವ ಕುರಿಹಟ್ಟಿಯಲ್ಲಿ ಕುರಿಗಳು ಸಾವನಪ್ಪಿವೆ. ಈ ಕುರಿತು ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next