Advertisement

ಮುಂಬಯಿಯಲ್ಲಿ  ಡಬ್ಲ್ಯುಟಿಎ ಟೆನಿಸ್‌ ಪಂದ್ಯಾವಳಿ

07:20 AM Jul 26, 2017 | Team Udayavani |

ಮುಂಬಯಿ: 5 ವರ್ಷಗಳ ಅನಂತರ ಡಬ್ಲ್ಯುಟಿಎ ಟೆನಿಸ್‌ ಕೂಟ ಭಾರತದಲ್ಲಿ ನಡೆಯಲಿದೆ. ವಿಶ್ವ ಮಟ್ಟದಲ್ಲಿ ನಡೆಯುವ ಕೂಟಕ್ಕೆ “ಮುಂಬೈ ಓಪನ್‌’ ಎಂದು ಹೆಸರಿಡಲಾಗಿದೆ. ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರರು ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೂಟದಿಂದಾಗಿ ಭಾರತೀಯ ಯುವ ಆಟಗಾರರಿಗೆ ಹೊಸ ಅನುಭವ ಸಿಗಲಿದೆ.

Advertisement

ಇತ್ತ ಮಹಾರಾಷ್ಟ್ರ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ “ಮಹಾರಾಷ್ಟ್ರ ಓಪನ್‌’ ಟೆನಿಸ್‌ ಟೂರ್ನಿಯನ್ನು ನಡೆಸಲು ಮುಂದಾಗಿದೆ. ಒಟ್ಟು ವಿಶ್ವದ ಅಗ್ರ 50 ಶ್ರೇಯಾಂಕದ ಆಟಗಾರರು ಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಕಳೆದ 3 ದಿನಗಳ ಹಿಂದಷ್ಟೇ  ಚೆನ್ನೈ ಓಪನ್‌ ಎಟಿಪಿ ಕೂಟವನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಗಿತ್ತು. ಇದಕ್ಕೆ “ಮಹಾರಾಷ್ಟ್ರ ಓಪನ್‌’ ಎಂದು ಮರುನಾಮಕರಣ ಮಾಡಲಾಗಿದೆ.

ಭಾರತೀಯ ಸಿಂಗಲ್ಸ್‌ ಆಟಗಾರರು ಅಗ್ರ 125ನೇ ಸ್ಥಾನಕ್ಕಿಂತ ಕೆಳಗಿರುವುದರಿಂದ ನೇರ ಪ್ರವೇಶದ ಅವಕಾಶ ಸಿಗುವುದಿಲ್ಲ. ಆದರೆ ಹೆಚ್ಚಿನ ಆಟಗಾರರಿಗೆ ವೈಲ್ಡ್‌ ಕಾರ್ಡ್‌ ಪ್ರವೇಶ ಸಿಗಲಿದೆ. ಅಂಕಿತ್‌ ರೈನಾ, ಕರ್ಮನ್‌ ಕೌರ್‌ ತಂಡಿ, ರಿತುಜಾ ಭೋಂಸ್ಲೆ ಸೇರಿದಂತೆ ಹಲವರು ವೈಲ್ಡ್‌ಕಾರ್ಡ್‌ ನಿರೀಕ್ಷೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next