Advertisement

ಹಸಿರು ತೋಟದಲ್ಲಿ ವಿಶ್ವ ಭೂ ದಿನ

09:17 AM Apr 23, 2019 | Team Udayavani |

ಬೆಂಗಳೂರು: ನಗರದ ಮಂತ್ರಿ ಸ್ಕ್ವೇರ್‌ ಮಾಲ್‌ ಬಳಿಯ ಗ್ರೀನ್‌ಪಾತ್‌ ಹಸಿರು ತೋಟದಲ್ಲಿ ಸೋಮವಾರ “ವಿಶ್ವ ಭೂಮಿ ದಿನಾಚರಣೆ’ ಕಾರ್ಯಕ್ರಮ ನಡೆಯಿತು.

Advertisement

ಕಾರ್ಯಕ್ರಮಕ್ಕೆ ವನ್ಯಜೀವಿ ಛಾಯಾಗ್ರಾಹಕ ಹಾಗೂ ಪರಿಸರ ತಜ್ಞ ಪಂಪಯ್ಯ ಮಳೇಮಠ ಹಾಗೂ ಹಿರಿಯ ಸಾವಯವ ಕೃಷಿಕ ಎ.ಆರ್‌.ರಾಮಯ್ಯ ಅತಿಥಿಗಳಾಗಿ ಆಗಮಿಸಿದ್ದರು.

ಮೊದಲು ರಾಶಿಪೂಜೆ ಮಾಡಿ ಸಕಲ ಜೀವಿಗಳಿಗೆ ಆಶ್ರಯ, ಅನ್ನ ನೀಡುತ್ತಿರುವ ಭೂಮಿಗೆ ಒಂದಿಸಲಾಯಿತು. ಆನಂತರ ಸಾಕ್ಷಯಚಿತ್ರ ಪ್ರದರ್ಶನ, ಜಾನಪದ ನೃತ್ಯ ಹಾಗೂ ಸಾವಯವ ಭೋಜನ ನಡೆಯಿತು.

ಎರಾ ಆರ್ಗಾನಿಕ್‌ನ 12ನೇ ಹಾಗೂ ಹಸಿರು ತೋಟದ 4ನೇ ವಾರ್ಷಿಕೋತ್ಸವ ಹಿನ್ನೆಲೆ ದಿ ಗ್ರೀನ್‌ ಪಾತ್‌ ಸಂಸ್ಥಾಪಕ ಎಚ್‌.ಆರ್‌.ಜಯರಾಮ್‌ ಸಂಸ್ಥೆ ನಡೆದು ಬಂದ ಹಾದಿ ಹಾಗೂ ನಗರದ ಜನತೆಯ ಬದಲಾದ ಜೀವನ ಶೈಲಿ ಕುರಿತು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next