Advertisement

Mangaluru; 7 ಮಂದಿ ಸಾಧಕರಿಗೆ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ

11:13 PM Feb 12, 2024 | Team Udayavani |

ಮಂಗಳೂರು: ಕೊಂಕಣಿ ಭಾಷಿಗ ಸಮುದಾಯಗಳಿಂದ ಸಮಾಜಕ್ಕೆ ಹಾಗೂ ದೇಶಕ್ಕೆ ಅಪಾರ ಕೊಡುಗೆ ದೊರಕಿದೆ. ಕೊಂಕಣಿ ವಿಶ್ವವ್ಯಾಪಿಯಾಗಿದ್ದು, ಸಮುದಾಯದ ಸೇವೆಯನ್ನು ಅವಗಣಿಸಲು ಅಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾ ನಿಲಯದ ಉಪಕುಲಪತಿ ಪ್ರೊ| ಜಯರಾಜ್‌ ಅಮಿನ್‌ ತಿಳಿಸಿದರು.

Advertisement

ಶಕ್ತಿನಗರದ ಕೊಂಕಣಿ ಭಾಷೆ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ವಿಶ್ವ ಕೊಂಕಣಿ ಕೇಂದ್ರದಲ್ಲಿ ರವಿವಾರ ವಿಶ್ವ ಕೊಂಕಣಿ ಸಮಾರೋಹ್‌ ಹಾಗೂ ವಿಶ್ವ ಕೊಂಕಣಿ ಪುರಸ್ಕಾರ್‌ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೊಂಕಣಿ ಭಾಷಿಗರ ಸಮುದಾಯ ಕಲೆ, ಸಾಹಿತ್ಯ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅಪ್ರತಿಮ ಕೊಡುಗೆ ನೀಡುತ್ತಿದ್ದಾರೆ. ವಿಶ್ವ ಕೊಂಕಣಿ ಕೇಂದ್ರವು ಎಲ್ಲ ಸಮುದಾಯದವರನ್ನು ಜತೆಯಲ್ಲೇ ಮುನ್ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಪ್ರಶಸ್ತಿ ಪುರಸ್ಕೃತರು
ವಿಮಲಾ ವಿ. ಪೈ ಸಾಹಿತ್ಯ ಪುರಸ್ಕಾರವನ್ನು ರಮಾನಂದ್‌ ರಾಯ್ಕರ್‌,ಆರ್‌.ಎಸ್‌. ಭಾಸ್ಕರ್‌ ಹಾಗೂ ಡಾ| ಪ್ರಕಾಶ್‌ ಪರಿಯಂಕರ್‌ ಅವರಿಗೆ, ಬಸ್ತಿ ವಾಮನ ಶೆಣೈ ಸೇವಾ ಪುರಸ್ಕಾರವನ್ನು ಶಕುಂತಳಾ ಅಜಿತ್‌ ಭಂಡಾರ್ಕರ್‌, ಜೋಸೆಫ್‌ ಕ್ರಾಸ್ತಾ ಅವರಿಗೆ, ಡಾ| ಪಿ. ದಯಾನಂದ ಪೈ ವಿಶ್ವ ಕೊಂಕಣಿ ಪುರಸ್ಕಾರವನ್ನು ಶ್ರೀನಿವಾಸ ರಾವ್‌ (ಕಾಸರಗೋಡು ಚಿನ್ನ) ಹಾಗೂ ರಮೇಶ್‌ ಲಾಡ್‌ ಅವರಿಗೆ ನೀಡಿ ಗೌರವಿಸಲಾಯಿತು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ, ಉಪಾಧ್ಯಕ್ಷ ಗಿಲ್ಬರ್ಟ್‌ ಡಿ’ಸೋಜಾ, ಪ್ರಮುಖರಾದ ಪ್ರದೀಪ್‌ ಜಿ. ಪೈ, ಡಾ| ಕಿರಣ್‌ ಬುಡ್ಕುಳೆ, ಜಗದೀಶ್‌ ಶೆಣೈ, ಸ್ನೇಹ ಶೆಣೈ ಉಪಸ್ಥಿತರಿದ್ದರು. ಸ್ಮಿತಾ ಶೆಣೈ ನಿರೂಪಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next