Advertisement

ನರೇಗಾ ಯೋಜನೆ ಕಾಮಗಾರಿ ವೀಕ್ಷಣೆ

05:58 AM May 17, 2020 | Lakshmi GovindaRaj |

ಗೌರಿಬಿದನೂರು: ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಯಡಿ ಯಲ್ಲಿ ನಿರ್ಮಾಣವಾಗಿರುವ ಹಾಗೂ ನಡೆಯುತ್ತಿರುವ ಕಾಮಗಾರಿಗಳನ್ನು ಜಿಪಂ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ್ಯ, ಜಿಪಂ ಸಿಇಒ  ಬಿ.ಫೌಝೀಯಾ ತರುನ್ನುಮ್‌ ಪರಿಶೀಲಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಮಾತನಾಡಿ, ಸಮುದಾಯಕ್ಕೆ ಆಸರೆಯಾಗುವ ಎಲ್ಲ ವಿಧದ ಕಾಮಗಾರಿ ಗಳು ನರೇಗಾ ಯೋಜನೆಯಡಿ ಯಲ್ಲಿದೆ ಎಂದು  ಹೇಳಿದರು.

Advertisement

ಜಿ.ಪಂ ಸಿಇಒ ಬಿ.ಫೌಝೀಯಾ ತರುನ್ನುಮ್‌ ಮಾತನಾಡಿ, ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಕಂಗಾ ಲಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿ ಸಮುದಾಯದ ಅಭಿವೃದ್ಧಿಗಾಗಿ ನಿಯಮಾನುಸಾರ ಕಾಮಗಾರಿ  ಮಾಡಲು ಅವಕಾಶವಿದೆ ಎಂದು ಹೇಳಿದರು. ತಾಪಂ ಅಧ್ಯಕ್ಷ ಆರ್‌.ಲೋಕೇಶ್‌, ಇಒ ಎನ್‌. ಮುನಿರಾಜು, ನರೇಗಾ ಸಹಾಯಕ ನಿರ್ದೇಶಕ ಪಿ.ಚಿನ್ನಪ್ಪ, ಜಿಪಂ ಸದಸ್ಯ ಪಿ.ಎನ್‌.ಪ್ರಕಾಶ್‌, ಎಚ್‌.ವಿ.ಮಂಜುನಾಥ್‌, ಮುಖಂಡ ರಂಗನಾಥ್‌,  ಬಿ.ಪಿ.ಅಶ್ವತ್ಥನಾರಾಯಣಗೌಡ, ಪ್ರಕಾಶರೆಡ್ಡಿ, ಜಿ.ಆರ್‌.ರಾಜಶೇಖರ್‌, ಬಾಬು, ಪ್ರಸನ್ನ, ಎನ್‌.ಪದ್ಮಶ್ರೀ, ಭವ್ಯ, ಪಿಡಿಒ ತಿಪ್ಪಯ್ಯ, ಲೋಕೇಶ್‌, ಎ. ಶೈಲಾ, ಕರಿಯಪ್ಪ, ಜಿ.ಶ್ರೀನಿವಾಸ್‌, ಮಡಿವಾಳಪ್ಪ ಇದ್ದರು.

ವಿವಿಧ ನರೇಗಾ ಕಾಮಗಾರಿ  ವೀಕ್ಷಣೆ: ಶ್ಯಾಂಪುರ ಗ್ರಾಪಂ ಕಟ್ಟಡ, ಶಾಲಾ ಕಾಂಪೌಂಡ್‌, ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿ, ಜಾನುವಾರುಗಳ ಕುಡಿಯುವ ನೀರಿನ ಕುಂಟೆಗೆ ಭೇಟಿ ನೀಡಿದರು. ಗೌಡಗೆರೆ ಗ್ರಾಪಂನಲ್ಲಿ ನೀರಿನ ಕಾಲುವೆ, ಕೃಷಿ ಹೊಂಡ, ನಾಲಾಬದು  ನಿರ್ಮಾಣ, ಅಲಕಾಪುರದಲ್ಲಿನ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿಯ ಮಳೆ ನೀರು ಕೊಯ್ಲು ಕಾಮಗಾರಿ, ಮುದುಗೆರೆಯಲ್ಲಿ ಉದ್ಯಾನವನ, ಕಲ್ಯಾಣಿ ಸೇರಿದಂತೆ ಹಲವು ಕಾಮಗಾರಿ ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next