Advertisement

ಶಬರಿಮಲೆಗೆ ಮಹಿಳೆಯರು? ತನಿಖೆಗೆ  ಸರ್ಕಾರ ಆದೇಶ

03:45 AM Apr 18, 2017 | Harsha Rao |

ತಿರುವನಂತಪುರ: ಶಬರಿಮಲೆಯಲ್ಲಿರುವ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ನೀಡಬೇಕೇ ಬೇಡವೇ ಎಂಬ ವಿಚಾರ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿ ರುವಾಗಲೇ ಅಲ್ಲಿಗೆ ಮಹಿಳೆಯರು ಪ್ರವೇಶಿಸಿದ್ದಾರೆ ಎಂದು ಹೇಳಲಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಸರ್ಕಾರ ತನಿಖೆ ನಡೆಸುವಂತೆ ದೇವಸ್ವಂ ಮಂಡಳಿಯ ಜಾಗೃತ ದಳಕ್ಕೆ ಆದೇಶಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ಫೋಟೋಗಳು ನಿಜವಾದದ್ದೇ ಅಥವಾ ತಾಂತ್ರಿಕವಾಗಿ ಸೃಷ್ಟಿಸಿದ್ದೇ ಎಂಬ ವಿಚಾರದ ಬಗ್ಗೆಯೂ ಪತ್ತೆ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

Advertisement

ಕೊಲ್ಲಂ ಮೂಲದ‌ ವಾಣಿಜ್ಯೋದ್ಯಮಿಯೊಬ್ಬರು ದೇಗು ಲಕ್ಕೆ ವಿಶೇಷ ಅತಿಥಿಯಾಗಿ ಭೇಟಿ ನೀಡಿದ್ದ ಸಮಯದಲ್ಲಿ ಕೆಲವು ಮಹಿಳೆಯರು ದೇವಾಲಯದ ಗರ್ಭಗುಡಿ ಪ್ರವೇಶ ಮಾಡಿದ್ದಾರೆ ಎಂದು ದೂರು ಸಲ್ಲಿಕೆಯಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next