Advertisement

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಪತ್ತೆ: ವರದಕ್ಷಿಣೆ ಕಿರುಕುಳ ಆರೋಪ; ಕಲ್ಲು ತೂರಾಟ

04:10 PM Jul 03, 2021 | Team Udayavani |

ವಿಜಯಪುರ: ನಗರದ ದಿವಟಗೇರಿ ಗಲ್ಲಿ ಪ್ರದೇಶದ ಗೃಹಿಣಿಯೊಬ್ಬರು ತನ್ನದೇ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮೃತಳ ತವರಿನವರು ಇದು ವರದಕ್ಷಿಣೆಗಾಗಿ ನಡೆದ ಹತ್ಯೆ ಎಂದು ಆರೋಪಿಸಿದ್ದಾರೆ.

Advertisement

ಪುಷ್ಪಾ ಕಾಪಸೆ (37 ವ) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಗೃಹಿಣಿ.

15 ವರ್ಷದ ಹಿಂದೆ ಜುಮನಾಳ ಮೂಲದ ಪುಷ್ಪಾ ಹಾಗೂ ನಗರದ ರೇಡಿಯಂ ಕಟಿಂಗ್ ಕೆಲಸ‌ ಮಾಡುತ್ತಿದ್ದ ಪ್ರದೀಪ ಜೊತೆ ವಿವಾಹ ಆಗಿದ್ದು, 13 ವರ್ಷದ ಮಗನೂ ಇದ್ದಾನೆ.

ಪುಷ್ಪಾಳ ತವರಿನವರ ಪ್ರಕಾರ ಇದು ಆತ್ಮಹತ್ಯೆ ಅಲ್ಲ, ವರದಕ್ಷಿಣೆ ಹಾಗೂ‌ ಆಸ್ತಿಗಾಗಿ ನಡೆದಿರುವ ಕೊಲೆ ಮಾಡಲಾಗಿದೆ. ನಂತರ ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ: ಸಿನಿಮೀಯ ಶೈಲಿಯಲ್ಲಿ ದರೋಡೆಕೋರರನ್ನು ಬೆನ್ನಟ್ಟಿ ಹಿಡಿದ ಯುವಕರು

Advertisement

ಈ ಹಿನ್ನೆಲೆಯಲ್ಲಿ ಮೃತಳ ತವರಿನ ಆಕ್ರೋಶಿತರು ಆಕೆಯ ಗಂಡನ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಿಟಕಿ ಗಾಜು ಒಡೆದಿವೆ. ಮೃತ ಪುಷ್ಪಾಳ ಪತಿ ಪ್ರದೀಪ‌‌ ಕಾಪಸೆ, ಅತ್ತೆ ವಾಸಂತಿ ಕಾಪಸೆ‌ ಸೇರಿದಂತೆ ನಾಲ್ವರು ಸೇರಿ‌ ಹತ್ಯೆ ಮಾಡಿದ್ದಾರೆ ಎಂದು‌ ಆರೋಪಿಸಲಾಗಿದೆ.

ಮಹಿಳೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆ ಆಗುತ್ತಲೇ, ಪತಿ ಹಾಗೂ ಮನೆಯವರು ಪರಾರಿಯಾಗಿದ್ದಾರೆ. ನೇಣು ಬಿಗಿದು ಹತ್ಯೆ ಮಾಡಿದ್ದರಿಂದಲೇ ಪ್ರದೀಪ ಮನೆಯವರು ಓಡಿ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ಧಾವಿಸಿರವ ಗೋಲಗುಂಬಜ್ ಠಾಣೆ ಪೊಲೀಸರು, ಆಕ್ರೋಶ ಭರಿತರಾಗಿರುವ ಮೃತಳ ತವರಿನವರನ್ನು ಸಮಾಧಾನಿಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next