Advertisement

ರೈಲ್ವೆ ನಿಲ್ದಾಣದಲ್ಲಿ ವಾಮಾಚಾರ

03:54 PM Dec 23, 2018 | |

ಇಂಡಿ: ರೈಲ್ವೆ ನಿಲ್ದಾಣದಲ್ಲಿ ವಾಮಾಚಾರ ಮಾಡಿದ ಘಟನೆ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ. ಲಚ್ಯಾಣ ಗ್ರಾಮದ ರೈಲ್ವೆ ನಿಲ್ದಾಣದ ಪ್ಲಾಟ್‌ ಫಾರ್ಮ್ ನಂ. 2ರ ಮೇಲೆ ಹಾಗಲಕಾಯಿ, ತೊಗರಿಕಾಯಿ, ಮೆಣಸಿನಕಾಯಿ, ಕೂಡಿಸಿ ಇಟ್ಟು ಕುಂಕುಮದಿಂದ ಪೂಜೆ ಮಾಡಿದ್ದಾರೆ. ಶನಿವಾರ ಬೆಳಗ್ಗೆ 7ಕ್ಕೆ ನಿಲ್ದಾಣಕ್ಕೆ ಬಂದ ಜನರು ಅದನ್ನು ಕಂಡು ಆಶ್ಚರ್ಯ ಚಕಿತರಾಗಿದ್ದಾರೆ.

Advertisement

ಈ ಕೃತ್ಯಯಾರು ಮಾಡಿದ್ದಾರೆಎಂಬುದು ಅಲ್ಲಿನ ಪ್ರಯಾಣಿಕರಿಗೂ ಗೊತ್ತಿಲ್ಲ. ಅಲ್ಲಿನ ರೈಲ್ವೆ ನಿಲ್ದಾಣದ ಸಿಬ್ಬಂದಿಯ ಗಮನಕ್ಕೂ ಬಂದಿಲ್ಲ. ನಸುಕಿನ ಜಾವ ಹಲವು ಪ್ರಯಾಣಿಕರು ಅದರ ಮೇಲೆ ನಡೆದಾಡಿದ ಪರಿಣಾಮ ತೊಗರಿ ಹಾಗಲಕಾಯಿಗಳು ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ರೈಲ್ವೆ ಇಲಾಖೆ ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next