Advertisement

ಸ್ಮಿತ್‌ ಚೆಂಡು ವಿರೂಪ ಮಾಡಿದ್ದೇಕೆ?

07:00 AM Dec 27, 2018 | Team Udayavani |

ಸಿಡ್ನಿ: ಈ ವರ್ಷ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿಯಲ್ಲಿ  ಚೆಂಡು ವಿರೂಪ ಮಾಡಿ ಒಂದು ವರ್ಷ ನಿಷೇಧಕ್ಕೊಳಗಾದ ಸ್ಟೀವ್‌ ಸ್ಮಿತ್‌, ತಾವೇಕೆ ಅಂತಹ ಕೆಲಸ ಮಾಡುವ ಸ್ಥಿತಿ ತಲುಪಿದೆವು ಎಂದು ವಿವರಿಸಿದ್ದಾರೆ. 

Advertisement

ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿ ಮಾಜಿ ಸಿಇಒ ಜೇಮ್ಸ್‌ ಸದರೆಲಂಡ್‌ ಹಾಗೂ ಉನ್ನತ ಪ್ರದರ್ಶನ ನಿರ್ದೇಶಕ ಪ್ಯಾಟ್‌ ಹೊವಾರ್ಡ್‌, ಎಂತಹ ಬೆಲೆ ತೆತ್ತಾದರೂ ಗೆಲ್ಲಲೇಬೇಕೆಂಬ ಪರಿಸ್ಥಿತಿ ಸೃಷ್ಟಿಸಿದ್ದರು. ಈ ರೀತಿಯ ಒತ್ತಡವೇ ಈ ವರ್ಷ ದ.ಆಫ್ರಿಕಾದಲ್ಲಿ ಚೆಂಡು ವಿರೂಪದಂತಹ ವಿಪರೀತದ ಹಂತಕ್ಕೆ ತಲುಪಲು ಕಾರಣವಾಗಿತ್ತು ಎನ್ನುವುದು ಸ್ಮಿತ್‌ ಪರೋಕ್ಷ ಅಭಿಪ್ರಾಯ.

2016ರಲ್ಲಿ ಹೋಬರ್ಟ್‌ನಲ್ಲಿ ದ.ಆಫ್ರಿಕಾ ವಿರುದ್ಧ ಟೆಸ್ಟ್‌ ಪಂದ್ಯ ಸೋತಿದ್ದಾಗ, ತಂಡದ ಕೊಠಡಿ ಪ್ರವೇಶಿಸಿದ್ದ ಜೇಮ್ಸ್‌ ಸದರೆಲಂಡ್‌, ಪ್ಯಾಟ್‌ ಹೊವಾರ್ಡ್‌, ನಾವು ನಿಮಗೆ ಹಣ ಕೊಡುತ್ತಿರುವುದು ಸುಮ್ಮನೆ ಆಡುವುದಕ್ಕಲ್ಲ, ಗೆಲ್ಲುವುದಕ್ಕೆ ಎಂದಿದ್ದರು. ಅವರ ಈ ಮಾತುಗಳು ನನಗೆ ಬಹಳ ನೋವುಂಟು ಮಾಡಿತ್ತು. ನಾವ್ಯಾರೂ ಸೋಲುವುದಕ್ಕೆ ಆಡುವುದಿಲ್ಲ. ಗೆಲ್ಲುವುದಕ್ಕಾಗಿಯೇ ಯತ್ನಿಸುತ್ತೇವೆ ಎಂದು ಸ್ಮಿತ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next