Advertisement

ಯಾರೀವರು ರಮೇಶ್ ಬೈಸ್…ಮಹಾರಾಷ್ಟ್ರದ 20ನೇ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕಾರ

06:01 PM Feb 18, 2023 | Team Udayavani |

ಮಹಾರಾಷ್ಟ್ರ: ಜಾರ್ಖಂಡ್ ಮಾಜಿ ರಾಜ್ಯಪಾಲ ರಮೇಶ್ ಬೈಸ್ ಅವರು ಶನಿವಾರ (ಫೆ.18) ಮಹಾರಾಷ್ಟ್ರದ 20ನೇ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು.

Advertisement

ಇದನ್ನೂ ಓದಿ:ವಿಧಾನಸೌಧದ ಬಾಗಿಲು ತಟ್ಟಿದ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರ ಪ್ರತಿಭಟನೆ

ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ವಿ.ಗಂಗಾಪುರ್ ವಾಲಾ ಅವರು ರಮೇಶ್ ಬೈಸ್ ಅವರಿಗೆ ಗೌಪ್ಯತೆ ಮತ್ತು ಪ್ರತಿಜ್ಞಾ ವಿಧಿ ಬೋಧಿಸಿದರು.

ಭಗತ್ ಸಿಂಗ್ ಕೋಶ್ಯಾರಿ ಅವರು ಕಳೆದ ವಾರ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ರಮೇಶ್ ಬೈಸ್ ಅವರು ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದು, ಈ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭಾಗವಹಿಸಿದ್ದರು.

ಯಾರೀವರು ರಮೇಶ್ ಬೈಸ್?

Advertisement

ರಮೇಶ್ ಬೈಸ್ ಅವರು 1947 ಆಗಸ್ಟ್ 2ರಂದು ಮಧ್ಯಪ್ರದೇಶದ ರಾಯ್ ಪುರದಲ್ಲಿ ಜನಿಸಿದ್ದರು. ಈ ಪ್ರದೇಶ ಈಗ ಚತ್ತೀಸ್ ಗಢ್ ನಲ್ಲಿದೆ. ಇವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ. ಬೈಸ್ ಅವರು 2021ರಿಂದ 2023ರವರೆಗೆ ಜಾರ್ಖಂಡ್ ರಾಜ್ಯಪಾಲರಾಗಿದ್ದರು. 2019ರಿಂದ 2021ರವರೆಗೆ ತ್ರಿಪುರಾ ಗವರ್ನರ್ ಆಗಿ ಕಾರ್ಯನಿರ್ವಹಿಸಿದ್ದರು.

ಬೈಸ್ ಅವರು ಭೋಪಾಲ್ ನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ಕೃಷಿಕರಾಗಿ ಗುರುತಿಸಿಕೊಂಡಿದ್ದರು. ಇವರು 1968ರ ಮೇ 1ರಂದು ರಮಾಭಾಯಿ ಬೈಸ್ ಅವರನ್ನು ವಿವಾಹವಾಗಿದ್ದರು. ಬೈಸ್ ದಂಪತಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು. 1978ರಲ್ಲಿ ರಾಯ್ ಪುರ್ ಮುನ್ಸಿಪಲ್ ಕಾರ್ಪೋರೇಶನ್ ಗೆ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದರು. 1980ರಲ್ಲಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. 1985ರಲ್ಲಿ ಬೈಸ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಸತ್ಯನಾರಾಯಣ ಶರ್ಮಾ ಎದುರು ಪರಾಜಯಗೊಂಡಿದ್ದರು.

1989ರಲ್ಲಿ ರಾಯ್ ಪುರ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಬಳಿಕ ಸತತವಾಗಿ ನಡೆದ 11, 12, 13, 14, 15 ಮತ್ತು 16ನೇ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.ಬೈಸ್ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಪರಿಸರ ಮತ್ತು ಅರಣ್ಯ ಖಾತೆ ಕೇಂದ್ರದ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next