Advertisement

ರೈತರು ಸಾಯುತ್ತಿರುವಾಗ ಬಿಜೆಪಿ, ಕಾಂಗ್ರೆಸ್‌ ಉಪವಾಸ ಪ್ರಹಸನ: ಶಿವಸೇನೆ

04:38 PM Apr 14, 2018 | udayavani editorial |

ಮುಂಬಯಿ : ”ಸಂಸತ್‌ ಕಲಾಪ ಹಾಳಾಗಿ ಹೋದುದಕ್ಕೆ ಪ್ರತಿಭಟನೆಯಾಗಿ ಈಚೆಗೆ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಕೈಗೊಂಡ ಉಪವಾಸ ಸತ್ಯಾಗ್ರಹ ಕೇವಲ ಒಂದು ಪ್ರಹಸನ” ಎಂದು ಶಿವಸೇನೆ ಲೇವಡಿ ಮಾಡಿದೆ. 

Advertisement

ಎರಡೂ ಪಕ್ಷಗಳ “ಉಪವಾಸ ನಿರತ’ ನಾಯಕರು ಪುಷ್ಕಳ ಭೋಜನ ಸವಿದ ಫೋಟೋಗಳು ಮಾಧ್ಯಮಗಳಲ್ಲಿ ವೈರಲ್‌ ಆಗಿರುವುದನ್ನು ಕಂಡಾಗ “ಉಪವಾಸ ಸತ್ಯಾಗ್ರಹ ಎನ್ನುವುದು ಕೇವಲ ಒಂದು ಪ್ರಹಸನ’ ಎಂಬುದು ಯಾರಿಗಾದರೂ ಮನವರಿಕೆಯಾಗುತ್ತದೆ ಎಂದು ಶಿವಸೇನೆ ತನ್ನ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಚಾಟಿ ಬೀಸಿದೆ. 

“ಈ ಉಪವಾಸ ಸತ್ಯಾಗ್ರಹದಿಂದ ಏನು ಸಾಧಿತವಾಯಿತು ಎಂಬುದನ್ನು ಯಾರೂ ನಿಖರವಾಗಿ ಹೇಳಲಾರರು. ಈ ದೇಶದ ಹೆಚ್ಚಿನ ಜನರು ಈಗಲೂ ಹಸಿವಿನಿಂದ ಇದ್ದಾರೆ. ಹಸಿವು ಮತ್ತು ಬಡತನದ ಪರಿಣಾಮವಾಗಿ ರೈತರ ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿರುವಾಗಲೇ ಮೂರು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ; ದೇಶದಲ್ಲಿ ನಾಲ್ಕು ಲಕ್ಷ ರೈತರು ಈ ಮಾರ್ಗವನ್ನು ಅನುಸರಿಸಿದ್ದಾರೆ’ ಎಂದು ಸೇನಾ ತನ್ನ ಸಂಪಾದಕೀಯದಲ್ಲಿ ಬರೆದಿದೆ. 

ಬಜೆಟ್‌ ಅಧಿವೇಶನದ ಸಂಸತ್‌ ಸದನ ಕಲಾಪ ಸಂಪೂರ್ಣವಾಗಿ ನಷ್ಟವಾದ ಕಾರಣಕ್ಕೆ  ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳ ನಾಯಕರು ಈಚೆಗೆ ನಡೆಸಿದ್ದ ಉಪವಾಸ ಸತ್ಯಾಗ್ರಹ ವಿವಾದದಲ್ಲೇ ಮುಳುಗಿ ಹೋಯಿತು ಎಂದು ಸೇನೆ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next