Advertisement

ಐನೆ‌ಕಿದು: ಸಿಡಿಲು ಬಡಿದು ಮನೆಗೆ ಹಾನಿ

06:00 AM Apr 10, 2018 | |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸುತ್ತಮುತ್ತಲ ಪ್ರದೇಶ ಗಳಲ್ಲಿ ಎ.8ರಂದು ಸಂಜೆ  ಗುಡುಗು, ಮಿಂಚು, ಗಾಳಿ ಸಹಿತ ಮಳೆ ಸುರಿದಿದ್ದು, ಐನೆ‌ಕಿದು ಗ್ರಾಮದ ನಿವಾಸಿ ಆಚಾರಿಗದ್ದೆ ಮೋಹನದಾಸ್‌ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. 

Advertisement

ಸಿಡಿಲ ಆಘಾತಕ್ಕೆ ಮನೆಯ ವಯರಿಂಗ್‌ ಸಂಪೂರ್ಣ ಕೆಟ್ಟುಹೋಗಿದೆ. ಮನೆಯ ಛಾವಣಿಗೂ ಅಲ್ಪ ಪ್ರಮಾಣದ ಹಾನಿ ಆಗಿದೆ. ಸಿಡಿಲಿಗೆ ಮನೆಯ ಗೃಹೋಪಯೋಗಿ ವಸ್ತುಗಳಾದ  ಗ್ರೈಂಡರ್, ಮಿಕ್ಸಿ, ಟಿವಿ ಇತ್ಯಾದಿಗಳಿಗೆ ಹಾನಿಯಾಗಿದ್ದು, ಅಪಾರ ನಷ್ಟ ಉಂಟಾಗಿದೆ. ಒಣಗಲು ಹಾಕಿದ್ದ ಬಟ್ಟೆಗಳಿಗೆ ಬೆಂಕಿ ತಗುಲಿದ್ದು, ಅದನ್ನು  ಗಮನಿಸಿದ ಮನೆಮಂದಿ   ಸಕಾಲದಲ್ಲಿ ಎಚ್ಚೆತ್ತು ಬೆಂಕಿ ನಂದಿಸಿದ ಕಾರಣ ದೊಡ್ಡ ದುರಂತ  ತಪ್ಪಿದೆ. ಮನೆ ಮುಂಭಾಗದ ತೋಟದ ಅಡಿಕೆ ಹಾಗೂ ತೆಂಗಿನ ಮರಕ್ಕೂ ಸಿಡಿಲು  ಬಡಿದಿದೆ. ಪಕ್ಕದ ಮನೆಯ ಮೋನಪ್ಪ ಆಚಾರಿಗದ್ದೆ  ಅವರಿಗೂ ಸಿಡಿಲ ಶಾಕ್‌ ತಗುಲಿದ್ದು, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next