Advertisement

ಕಾಶ್ಮೀರ ಪರಿಹಾರಕ್ಕೆ ಮೂರನೆಯವರೇಕೆ?

09:41 AM Aug 24, 2019 | Team Udayavani |

ಶಾಂಟಿಲ್ಲಿ: “ಭಾರತ ಮತ್ತು ಪಾಕಿಸ್ತಾನವು ಕಾಶ್ಮೀರ ವಿವಾದವನ್ನು ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳ ಬೇಕೇ ವಿನಾ, ಅದರಲ್ಲಿ ಮೂರನೆಯವರು ಮೂಗು ತೂರಿಸಲು ಬಿಡಬಾರದು.’ ಇಂಥದ್ದೊಂದು ಸಲಹೆ ನೀಡಿರುವುದು ಫಾನ್ಸ್‌ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರನ್‌. 3 ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಫ್ರಾನ್ಸ್‌ ಭೇಟಿ ವೇಳೆ ಮ್ಯಾಕ್ರನ್‌ ಈ ಮಾತುಗಳನ್ನಾಡಿದ್ದಾರೆ.

Advertisement

ಸುಮಾರು 90 ನಿಮಿಷಗಳ ದೀರ್ಘ‌ ಮಾತುಕತೆ ವೇಳೆ ಕಾಶ್ಮೀರ ವಿವಾದ, 370ನೇ ವಿಧಿ ರದ್ದು ಕುರಿತು ಉಭಯ ನಾಯಕರು ಚರ್ಚಿಸಿದ್ದು, ಕಾಶ್ಮೀರ ವಿವಾ ದವು ಎರಡು ದೇಶಗಳಿಗೆ ಸಂಬಂಧಿ ಸಿದ ವಿಚಾರವಾಗಿದ್ದು, ಆ ಪ್ರದೇಶದಲ್ಲಿ ಹಿಂಸಾಚಾರಕ್ಕೆ ಪ್ರಚೋದಿ ಸಲು ಅಥವಾ ವಿವಾದದಲ್ಲಿ ಹಸ್ತಕ್ಷೇಪ ಮಾಡಲು ಯಾರೂ ಹೋಗಬಾರದು ಎಂದು ಮ್ಯಾಕ್ರನ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಮೂಲಕ “ಸಂಧಾನ’ದ ಕುರಿತು ಪದೇ ಪದೆ ಪ್ರಸ್ತಾಪಿಸುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್‌ಗೂ, ಪಾಕ್‌ಪ್ರಧಾನಿ ಇಮ್ರಾನ್‌ಗೂ ಮ್ಯಾಕ್ರನ್‌ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಇದಷ್ಟೆ ಅಲ್ಲ, ಶಾಂತಿ ಕಾಪಾಡುವ ಸಂಬಂಧ ಪಾಕಿ ಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೂ ಸಲಹೆ ನೀಡುವುದಾಗಿ ಮ್ಯಾಕ್ರನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next