Advertisement

ಚುನಾವಣಾ ಅಧಿಸೂಚನೆ ಎಂದರೇನು?

06:45 AM Apr 17, 2018 | |

ಬೆಂಗಳೂರು: ನೀತಿ ಸಂಹಿತೆ ಜಾರಿ, ಅಧಿಸೂಚನೆ ಪ್ರಕಟ, ಬಿ. ಫಾರಂ, ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ಸ್ವೀಕಾರ, ತಿರಸ್ಕಾರ ಇವು ಚುನಾವಣೆ ಸಂದರ್ಭದಲ್ಲಿ ಹೆಚ್ಚಾಗಿ ಕೇಳಿ ಬರುವ ಆಡಳಿತಾತ್ಮಕ ಪದಗಳು. ಈ ಮಧ್ಯೆ 2018ರ ಚುನಾವಣೆಗೆ ಏ.17ರಂದು ಅಧಿಸೂಚನೆ ಹೊರಬೀಳಲಿದೆ. ಹೀಗಿರುವಾಗ ಈ ಅಧಿಸೂಚನೆ ಅಂದರೇನು ಅನ್ನುವುದರ ಬಗ್ಗೆ ಮತದಾರರಿಗೆ ಒಂದಿಷ್ಟು ಸಂಕ್ಷಿಪ್ತ ಮಾಹಿತಿ.

Advertisement

ಚುನಾವಣಾ ವೇಳಾ ಪಟ್ಟಿ ಪ್ರಕಟವಾದ ಕೆಲವು ದಿನಗಳ ಬಳಿಕ ಚುನಾವಣಾ ಆಯೋಗ ಗೆಜೆಟ್‌ ಅಧಿಸೂಚನೆ ಹೊರಡಿಸುತ್ತದೆ. ಈ ಅಧಿಸೂಚನೆ ಹೊರಬೀಳುತ್ತಿದ್ದಂತೆ ಚುನಾವಣಾ ಪ್ರಕ್ರಿಯೆಗೆ ಅನೌಪಚಾರಿಕ ಚಾಲನೆ ಸಿಗುತ್ತದೆ. ಚುನಾವಣಾ ಅಧಿಸೂಚನೆ ಒಂದು ರೀತಿಯಲ್ಲಿ ಮತದಾರರಿಗೆ ಚುನಾವಣಾ ಆಯೋಗದ “ಕರೆಯೋಲೆ’ ಇದ್ದಂತೆ. ಅಧಿಸೂಚನೆ ಹೊರಡಿಸುವ ಮೂಲಕ ಚುನಾವಣಾ ಆಯೋಗ “ಬನ್ನಿ ಶಾಸನಸಭೆಗೆ ನಿಮ್ಮ ಪ್ರತಿನಿಧಿಯನ್ನು’ ಆಯ್ಕೆ ಮಾಡಿ ಎಂದು ಮತದಾರರಿಗೆ ಕರೆ ನೀಡುತ್ತದೆ.

ಅಧಿಸೂಚನೆ ಹೊರಬಿದ್ದ ದಿನದಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗುತ್ತದೆ. ನಾಮಪತ್ರ ಸಲ್ಲಿಸಲು ಒಂದು ವಾರ ಅವಕಾಶವಿರುತ್ತದೆ. ಅದಾದ ಬಳಿಕ ನಾಮಪತ್ರ ಪರಿಶೀಲನೆಗೆ 2 ದಿನ ಮತ್ತು ನಾಮಪತ್ರ ವಾಪಸ್‌ ಪಡೆಯಲು ಎರಡು ದಿನ ಕಾಲಾವಕಾಶ ಕೊಡಲಾಗುತ್ತದೆ. ನಾಮಪತ್ರ ವಾಪಸ್‌ ಪಡೆಯುವ ಪ್ರಕ್ರಿಯೆ ಮುಗಿದ ದಿನದಿಂದ ಕನಿಷ್ಠ ಎರಡು ವಾರಗಳ ಕಾಲ ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡಲಾಗುತ್ತದೆ. ಫ‌ಲಿತಾಂಶ ಹೊರಬಿದ್ದ ಎರಡು ದಿನಗಳ ಬಳಿಕ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಆ ಮೂಲಕ ಚುನಾವಣಾ ಅಧಿಸೂಚನೆಗೂ ತೆರೆ ಬೀಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next