Advertisement

ವೀಕೆಂಡ್ ಕರ್ಫ್ಯೂ: ಬದಲಾವಣೆ ಇಲ್ಲ

01:42 PM Jun 19, 2021 | Team Udayavani |

ಬೆಂಗಳೂರು: ವೀಕೆಂಡ್ ಕರ್ಫ್ಯೂನಲ್ಲಿಯಾವುದೇ ಬದಲಾವಣೆ ಇರುವುದಿಲ್ಲ. ಈಹಿಂದೆ ಯಾವ ರೀತಿಯಾಗಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿತ್ತೋಅದೇ ಮಾದರಿ ಮುಂದುವರಿಯಲಿದೆ ಎಂದು ಬಿಬಿಎಂಪಿ ಮುಖ್ಯಆಯುಕ್ತ ಗೌರವ್ ಗುಪ್ತತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಕ್ರವಾರ ಸಂಜೆಯಿಂದಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ.ಅನಗತ್ಯವಾಗಿಯಾರೂಸಹಹೊರಗಡೆ ಓಡಾಡಬಾರದುಎಂದು ಮನವಿ ಮಾಡಿದ್ದಾರೆ.ಅಲ್ಲದೆ, ಈ ಬಗ್ಗೆ ನಗರ ಪೊಲೀಸ್ ಆಯುಕ್ತಕಮಲ್ಪಂತ್ಅವರಜೊತೆಸಭೆನಡೆಸಲಾಗಿದೆ.ಅವರೇ ಖುದ್ದು ಹಲವೆಡೆ ಭೇಟಿ ಕಾರ್ಯನಿರ್ವಹಿಸಲಿದ್ದಾರೆ.ಮೂರನೇ ಅಲೆ ಬಗ್ಗೆ ತಜ್ಞರುಈಗಾಗಲೇ ತಮ್ಮಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅದರಂತೆ ಮೂರನೇ ಅಲೆ ಯಾವಾಗ ಬರುñದೆ ¤ಎಂದು ಅಂದಾಜಿಸಲಾಗಿದೆ ಆದರೆ, ನಾವು ಅನಗತ್ಯವಾಗಿ ಓಡಾಡಿದರೆ ನಿರೀಕ್ಷೆಗಿಂತ ಮುಂಚಿತವಾಗಿಯೇ ಮೂರನೇ ಅಲೆ ಬರಬಹುದು ಎಂದು ಸಾರ್ವಜನಿಕರಿಗೆಎಚ್ಚರಿಕೆ ರವಾನಿಸಿದ್ದಾರೆ.ನಗರದಲ್ಲಿ ಜೂ.21ರಂದುಸೀಮಿತವಾಗಿ ಸಾರಿಗೆ ಸಂಚಾರ ಸಹ ಆರಂಭ ವಾಗುವ ಸಾಧ್ಯತೆ ಇರಲಿದೆ. ಕೈಗಾರಿಕೆಗಳಿಗೆ ಅನುಮತಿ ನೀಡಲಿದ್ದೆವೆ . ಜತೆಗೆ, ಕೆಲವೊಂದುವಾಣಿಜ್ಯೋದ್ಯಮ ಚಟುವಟಿಕೆಗಳಿಗೂ ಅನುಮತಿ ಸಿಗಲಿದೆ. ಉಳಿದಂತೆ, ನಗರದ ಲ್ಲಿನಕೋವಿಡ್ ಸೋಂಕಿನ ಸ್ಥಿತಿಗತಿ ನೋಡಿಕೊಂಡುಯಾವೆಲ್ಲಾ ಚಟುವಟಿಕೆಗಳಿಗೆ ಅವಕಾಶನೀಡಬೇಕು ಎಂದು ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next