Advertisement

ಮಹಾರಾಷ್ಟ್ರದಲ್ಲಿ ಮುಸ್ಲಿಮರು ಗುರಿಯಾಗುತ್ತಿದ್ದಾರೆ : ಅಬು ಅಸಿಂ ಅಜ್ಮಿ

03:26 PM Jul 03, 2022 | Team Udayavani |

ಮುಂಬಯಿ: ಮಹಾರಾಷ್ಟ್ರದಲ್ಲಿ ಜಾತ್ಯತೀತತೆ ಬೇಕು ಎಂಬ ಕಾರಣಕ್ಕೆ ನಾನು ಮಹಾ ವಿಕಾಸ್ ಅಘಾಡಿ ಬೆಂಬಲಿಸಿದ್ದೇನೆ, ಯಾವುದೇ ಹುದ್ದೆಯನ್ನು ಕೇಳಿಲ್ಲ ಎಂದು ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಅಧ್ಯಕ್ಷ ಮತ್ತು ಶಾಸಕ ಅಬು ಅಸಿಂ ಅಜ್ಮಿ ಹೇಳಿಕೆ ನೀಡಿದ್ದಾರೆ.

Advertisement

ಎಎನ್ ಐ ನೊಂದಿಗೆ ಮಾತನಾಡಿದ ಅವರು, ಶಿವಸೈನಿಕರು ಬಾಬರಿ ಮಸೀದಿಯನ್ನು ಕೆಡವಿದರು ಎಂಬುದಕ್ಕೆ ಹೆಮ್ಮೆಯಿದೆ ಎಂದು ಅವರು ಒಮ್ಮೆ ಸದನದಲ್ಲಿ ಹೇಳಿದ್ದರು. ಬಿಜೆಪಿ ಬರಬಾರದು ಎಂದು ನಾವು ಸಹಿಸಿಕೊಂಡಿದ್ದೆವು ಎಂದರು.

ಉದ್ಧವ್ ಅವರು ಔರಂಗಾಬಾದ್ ಮತ್ತು ಉಸ್ಮಾನಾಬಾದ್ ಹೆಸರನ್ನು ಮರುನಾಮಕರಣ ಮಾಡಿದ್ದಾರೆ. ಮುಸ್ಲಿಮರನ್ನು ಬಿಜೆಪಿ, ಉದ್ಧವ್ ಮತ್ತು ಈಗ ಶಿಂಧೆಯವರಿಂದಲೂ ಗುರಿಯಾಗಿಸುತ್ತಿದ್ದಾರೆ. ಹಿಂದೂ ಧರ್ಮವು ತಪ್ಪಲ್ಲ, ದ್ವೇಷವನ್ನು ಹರಡುವುದು ತಪ್ಪು ಎಂದು ಹೇಳಿಕೆ ನೀಡಿದರು.

ಇದನ್ನೂ ಓದಿ : ಶಿಂಧೆ ಬಣಕ್ಕೆ ನಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗಲಿಲ್ಲ: ಆದಿತ್ಯ ಠಾಕ್ರೆ

Advertisement

Udayavani is now on Telegram. Click here to join our channel and stay updated with the latest news.

Next