Advertisement

ಗೀತಾ ಶಿವರಾಜ ಕುಮಾರ್‌ಗೆ ಬೆಂಬಲ ನೀಡೆವು: ಪ್ರಣವಾನಂದ ಶ್ರೀ

11:48 PM Mar 03, 2024 | Team Udayavani |

ಕಾರವಾರ: ನಟ ಶಿವರಾಜ ಕುಮಾರ್‌ ಅವರ ಪತ್ನಿ ಗೀತಾ ಶಿವರಾಜ ಕುಮಾರ್‌ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ನಾನು ಬೆಂಬಲ ನೀಡುವುದಿಲ್ಲ ಎಂದು ಈಡಿಗ ಮಹಾ ಮಂಡಳಿ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ| ಡಾ| ರಾಜಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನದ ಅವಕಾಶ ಸಿಕ್ಕಿದ್ದರೂ ಅವರು ಒಪ್ಪಿಕೊಳ್ಳ ಲಿಲ್ಲ. ರಾಜಕೀಯದಲ್ಲಿ ದೊಡ್ಡ ಅವಕಾಶ ಬಂದರೂ ರಾಜಕುಮಾರ್‌ ರಾಜಕಾರಣಕ್ಕೆ ಹೋಗಲಿಲ್ಲ. ಅವರ ಕುಟುಂಬವೂ ರಾಜಕಾರಣಕ್ಕೆ ಬರಬಾರದು. ಅವರಂತೆ ಇರಬೇಕು ಎಂಬುದೇ ನನ್ನ ಭಾವನೆ. ಹೀಗಾಗಿ ಗೀತಾ ಶಿವರಾಜಕುಮಾರ್‌ ಚುನಾ ವಣೆಗೆ ನಿಂತರೆ ನಾನು ಖಂಡಿತ ಬೆಂಬಲ ಕೊಡುವುದಿಲ್ಲ ಎಂದರು.

ಬಿ.ಕೆ.ಹರಿಪ್ರಸಾದ್‌ ಹೇಳಿಕೆಗೆ ನಮ್ಮ ಸಹಕಾರ ಇಲ್ಲ. ಈ ದೇಶದ ಮೇಲೆ ಭಕ್ತಿ ಇರುವವರು, ಈ ದೇಶದ ಅನ್ನ-ಗಾಳಿ ಬಳಸುವ ಯಾರೂ ದೇಶದ ವಿರುದ್ಧ ಮಾತನಾಡಬಾರದು. ದೇಶದ ವಿರುದ್ಧ ಮಾತನಾಡಿದರೆ ಹೆತ್ತ ತಾಯಿಗೆ ದ್ರೋಹ ಮಾಡಿದಂತೆ. ದೇಶದ್ರೋಹದ ಹೇಳಿಕೆಗಳನ್ನು ನಾವು ಮತ್ತು ನಮ್ಮ ಸಮಾಜದವರು ಎಂದೂ ಕೊಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next