Advertisement

Shiggaon Bypoll: ನಾವು ಟಿಕೆಟ್‌ ಕೇಳಿಲ್ಲ: ಭರತ್‌ ಬೊಮ್ಮಾಯಿ

11:54 PM Oct 20, 2024 | Team Udayavani |

ಬೆಂಗಳೂರು: ನಾವು ಟಿಕೆಟ್‌ ಕೇಳಿರಲಿಲ್ಲ. ವರಿಷ್ಠರು ಲೆಕ್ಕಾಚಾರ ಮಾಡಿ ಒಂದು ತೀರ್ಮಾನ ಮಾಡಿದ್ದಾರೆ. ಅದಕ್ಕೆ ಬದ್ಧರಾಗಿರುತ್ತೇನೆ. ನಾಳೆಯಿಂದಲೇ ಕ್ಷೇತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ. ಶಿಗ್ಗಾವಿಯಲ್ಲಿ ಮತ್ತೆ ಕಮಲ ಅರಳಲಿದೆ ಎಂದು ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸುದ್ದಿಗಾರರ ಜತೆ ಅವರು ಮಾತನಾಡಿ, ನಮ್ಮ ತಂದೆಯವರಾದ ಬಸವರಾಜ ಬೊಮ್ಮಾಯಿ 4 ಬಾರಿ ಗೆದ್ದು ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದನ್ನು ಮೆಚ್ಚಿಕೊಂಡ ಜನರ ಅಪೇಕ್ಷೆಯಂತೆ ವರಿಷ್ಠರು ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರು.

ವೈಯಕ್ತಿಕ ಕಾರಣದಿಂದ ಟಿಕೆಟ್‌ ಬೇಡ ಎನ್ನಿಸಿತ್ತು. ಹೀಗಾಗಿ ನಾವು ಟಿಕೆಟ್‌ ಕೇಳಿರಲಿಲ್ಲ. ಆದರೆ ವರಿಷ್ಠರು ಲೆಕ್ಕಾಚಾರ ಮಾಡಿ ಒಂದು ತೀರ್ಮಾನ ಮಾಡಿದ್ದಾರೆ. ಅದಕ್ಕೆ ಬದ್ಧರಾಗಿರುತ್ತೇವೆ. 2018ರಿಂದ ತಂದೆಯ ಪರವಾಗಿ ಕ್ಷೇತ್ರದಲ್ಲಿ ಚುನಾವಣ ಕೆಲಸ ಮಾಡಿಕೊಂಡು ಬಂದಿದ್ದೇನೆ. ಲೋಕಸಭಾ ಚುನಾವಣೆ ವೇಳೆಯೂ ಅವರ ಪರವಾಗಿ ಮನೆ-ಮನೆಗೂ ಭೇಟಿ ಕೊಟ್ಟಿದ್ದೇನೆ.

ಆಕಾಂಕ್ಷಿಗಳಾಗಿದ್ದವರೂ ನಮ್ಮ ತಂದೆಯವರ ಜತೆಗೆ, ನನ್ನ ಜತೆಗೆ ಇದ್ದಾರೆ. ಎಲ್ಲರೂ ಒಟ್ಟಾಗಿ ಶಿಗ್ಗಾವಿಯಲ್ಲಿ ಮತ್ತೆ ಕಮಲ ಅರಳಿಸುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next